More

    50 ಸಿಮ್​ಗಳನ್ನು ಬದಲಿಸಿದ್ದರೆ ಸುಶಾಂತ್​ ಸಿಂಗ್​; ಶೇಖರ್​ ಸುಮನ್​ ಮೇಲೆ ಸಿಟ್ಟಾಗಿದ್ದೇಕೆ ನಟನ ಕುಟುಂಬ

    ಪಟನಾ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ವಿಚಾರವಾಗಿ ನಟ ಶೇಖರ್​ ಸುಮನ್​ ಅಚ್ಚರಿಯ ವಿಷಯವೊಂದನ್ನು ಹೊರ ಹಾಕಿದ್ದಾರೆ.

    ಬಾಲಿವುಡ್​ನಲ್ಲಿರುವ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜತೆಗೆ, ಸುಶಾಂತ್​ ಸಿಂಗ್​ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಬೆಳವಣಿಗೆ ಬಗ್ಗೆ ಸುಶಾಂತ್​ ಸಿಂಗ್​ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಸುಶಾಂತ್​ ಸಿಂಗ್​ ಸಾವಿನ ಹೆಸರಲ್ಲಿ ರಾಜಕೀಯ ನಡೆಸುವುದು ಬೇಡ ಎಂದು ಹೇಳಿದೆ.

    ಇದನ್ನೂ ಓದಿ; ಸುಶಾಂತ್​ ಸಿಂಗ್​ ಸಾವಿನ ಪ್ರಕರಣದ ಸಾಕ್ಷ್ಯಾಧಾರಗಳ ನಾಶ; ಬಿಜೆಪಿ ಸಂಸದೆ ಅನುಮಾನಕ್ಕೂ ಇದೆ ಸಾಕ್ಷ್ಯ

    ಪಟನಾದಲ್ಲಿರುವ ಸುಶಾಂತ್​ ಸಿಂಗ್​ ಮನೆಗೆ ಭೇಟಿ ನೀಡಿದ್ದ ಶೇಖರ್​ ಸುಮನ್​ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಬಳಿಕ ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಸುಶಾಂತ್​ ಸಾವಿನ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

    ಈ ವೇಳೆ ಬಾಲಿವುಡ್​ನಲ್ಲಿ ಭಾರಿ ಗುಂಪುಗಾರಿಕೆ ಇದ್ದು, ಅದನ್ನು ಎದುರಿಸಿ ಜಯಿಸುವುದು ಕಷ್ಟದ ಕೆಲಸ. ಇದನ್ನೂ ಮುರಿಯಬೇಖಿದೆ. ಸುಶಾಂತ್​ ಪತ್ರವೊಂದನ್ನು ಬರೆದಿಟ್ಟಿರಲೇಬೇಕು ಎಂಬುದು ನನ್ನ ವಾದ ಎಂದು ಹೇಳಿದ್ದರು. ಜತೆಗೆ, ಸುಶಾಂತ್​ ಸಿಂಗ್​ 50 ಸಿಮ್​ಗಳನ್ನು ಬದಲಾಯಿಸಿದ್ದರು ಎಂಬ ವಿಚಾರವನ್ನು ತಿಳಿಸಿದ್ದರು.

    ಇದನ್ನೂ ಓದಿ; ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

    ಇದೇ ವೇಳೆ ಸುಶಾಂತ್​ ಗೆಳೆಯ ಎಂದು ಹೇಳಿಕೊಳ್ಳುತ್ತಿರುವ ಸಂದೀಪ್​ ಸಿಂಗ್​, ಸುಶಾಂತ್​ ಸಾವು ದುರದೃಷ್ಟದ ಘಟನೆ ಸಾವಿನ ಬಗ್ಗೆ ಅನುಮಾನಪಡುವುದು ಏನೂ ಇಲ್ಲ. ನಾವೆಲ್ಲ ತಿಳಿದುಕೊಂಡಿರುವುದು ತಪ್ಪು ಎಂದು ಹೇಳಿಕೆ ನೀಡಿದ್ದರು. ಈಗ ಆ ವ್ಯಕ್ತಿಯೇ ಸಿಬಿಐ ತನಿಖೆಗೆ ಒತ್ತಾಯಿಸಿದ ಶೇಖರ್​ ಸುಮನ್​ ಜತೆಗೆ ವೇದಿಕೆ ಹಂಚಿಕೊಂಡಿದ್ದಾನೆ. ಇವರೆಲ್ಲ ರಾಜಕೀಯ ಕಾರಣಗಳಿಗಾಗಿ ಸುಶಾಂತ್​ ಸಾವಿನ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುಶಾಂತ್​ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್​ ನಟ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts