ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ವಿಚಾರವಾಗಿ ನಟ ಶೇಖರ್ ಸುಮನ್ ಅಚ್ಚರಿಯ ವಿಷಯವೊಂದನ್ನು ಹೊರ ಹಾಕಿದ್ದಾರೆ.
ಬಾಲಿವುಡ್ನಲ್ಲಿರುವ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಜತೆಗೆ, ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಬೆಳವಣಿಗೆ ಬಗ್ಗೆ ಸುಶಾಂತ್ ಸಿಂಗ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಸುಶಾಂತ್ ಸಿಂಗ್ ಸಾವಿನ ಹೆಸರಲ್ಲಿ ರಾಜಕೀಯ ನಡೆಸುವುದು ಬೇಡ ಎಂದು ಹೇಳಿದೆ.
ಇದನ್ನೂ ಓದಿ; ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಸಾಕ್ಷ್ಯಾಧಾರಗಳ ನಾಶ; ಬಿಜೆಪಿ ಸಂಸದೆ ಅನುಮಾನಕ್ಕೂ ಇದೆ ಸಾಕ್ಷ್ಯ
ಪಟನಾದಲ್ಲಿರುವ ಸುಶಾಂತ್ ಸಿಂಗ್ ಮನೆಗೆ ಭೇಟಿ ನೀಡಿದ್ದ ಶೇಖರ್ ಸುಮನ್ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಬಳಿಕ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಸುಶಾಂತ್ ಸಾವಿನ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಈ ವೇಳೆ ಬಾಲಿವುಡ್ನಲ್ಲಿ ಭಾರಿ ಗುಂಪುಗಾರಿಕೆ ಇದ್ದು, ಅದನ್ನು ಎದುರಿಸಿ ಜಯಿಸುವುದು ಕಷ್ಟದ ಕೆಲಸ. ಇದನ್ನೂ ಮುರಿಯಬೇಖಿದೆ. ಸುಶಾಂತ್ ಪತ್ರವೊಂದನ್ನು ಬರೆದಿಟ್ಟಿರಲೇಬೇಕು ಎಂಬುದು ನನ್ನ ವಾದ ಎಂದು ಹೇಳಿದ್ದರು. ಜತೆಗೆ, ಸುಶಾಂತ್ ಸಿಂಗ್ 50 ಸಿಮ್ಗಳನ್ನು ಬದಲಾಯಿಸಿದ್ದರು ಎಂಬ ವಿಚಾರವನ್ನು ತಿಳಿಸಿದ್ದರು.
ಇದನ್ನೂ ಓದಿ; ನಟ ಸುಶಾಂತ್ ಸಿಂಗ್ ರಜಪೂತ್ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ
ಇದೇ ವೇಳೆ ಸುಶಾಂತ್ ಗೆಳೆಯ ಎಂದು ಹೇಳಿಕೊಳ್ಳುತ್ತಿರುವ ಸಂದೀಪ್ ಸಿಂಗ್, ಸುಶಾಂತ್ ಸಾವು ದುರದೃಷ್ಟದ ಘಟನೆ ಸಾವಿನ ಬಗ್ಗೆ ಅನುಮಾನಪಡುವುದು ಏನೂ ಇಲ್ಲ. ನಾವೆಲ್ಲ ತಿಳಿದುಕೊಂಡಿರುವುದು ತಪ್ಪು ಎಂದು ಹೇಳಿಕೆ ನೀಡಿದ್ದರು. ಈಗ ಆ ವ್ಯಕ್ತಿಯೇ ಸಿಬಿಐ ತನಿಖೆಗೆ ಒತ್ತಾಯಿಸಿದ ಶೇಖರ್ ಸುಮನ್ ಜತೆಗೆ ವೇದಿಕೆ ಹಂಚಿಕೊಂಡಿದ್ದಾನೆ. ಇವರೆಲ್ಲ ರಾಜಕೀಯ ಕಾರಣಗಳಿಗಾಗಿ ಸುಶಾಂತ್ ಸಾವಿನ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್ ನಟ…?