ನವದೆಹಲಿ: ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದಲ್ಲಿ ದರೋಡೆಕೋರ, ರಾಜಕಾರಣಿ ಮುಖ್ತಾರ್ ಅನ್ಸಾರಿ ಪುತ್ರ ಅಬ್ಬಾಸ್ ಅನ್ಸಾರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ.
ಇದನ್ನೂ ಓದಿ: ನಿಹಾರಿಕಾ ಕೊನಿಡೇಲ ಎರಡನೇ ಮದುವೆ… ಶಾಕಿಂಗ್ ಪೋಸ್ಟ್ ಹಾಕಿದ ಮಾಜಿ ಪತಿ!
ಮಾಫಿಯಾ ಡಾನ್ ಆಗಿರುವ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಅವರ ಜಾಮೀನು ಅರ್ಜಿಯನ್ನು ಕಳೆದ ವಾರ ಸುಪ್ರೀಂ ಕೋರ್ಟ್ ಮಾರ್ಚ್ 18 ಕ್ಕೆ ಮುಂದೂಡಿತ್ತು.
ಶೂಟಿಂಗ್ ಸ್ಪರ್ಧೆಯ ನೆಪದಲ್ಲಿ ವಿದೇಶಿ ಬಂದೂಕುಗಳನ್ನು ಖರೀದಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಅಬ್ಬಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ನೀಡಿದ ಆಮದು ಪರವಾನಗಿಯನ್ನು ಉಲ್ಲಂಘಿಸಿ ಪಿಸ್ತೂಲ್, ರೈಫಲ್ ಮತ್ತು ಆರು ಬ್ಯಾರೆಲ್ಗಳನ್ನು ಆಮದು ಮಾಡಿಕೊಂಡಿದ್ದಲ್ಲದೆ, ಎರಡು ಬ್ಯಾರೆಲ್ ನಿಷೇಧಿತ ಬೋರ್ಗಳನ್ನು ಆಮದು ಮಾಡಿಕೊಂಡಿದ್ದಾನೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿತ್ತು.