More

    20ರಿಂದ ಮೇ 15ರವರೆಗೆ ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ

    ಚಿತ್ರದುರ್ಗ: ಕೇಂದ್ರದ ಬೆಂಬಲ ಬೆಲ ಯೋಜನೆಯಡಿ ಫೆ.20 ರಿಂದ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಪ್ರಕ್ರಿಯೆ ಪ್ರಾರಂಭ ವಾಗಲಿದೆ. ಪ್ರತಿ ಕ್ವಿಂಟಾಲ್‌ಗೆ 5335 ರೂ.ದರದೊಂದಿಗೆ ಕಡಲೆಕಾಳು ಖರೀದಿಸಲು ಜಿಲ್ಲೆಯ 13 ಸ್ಥಳಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸ ಲಾಗುವುದು ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.

    ಡಿಸಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 1.17 ಲಕ್ಷ ಮೆಟ್ರಿಕ್ ಟನ್ ಕಡಲೆ ಕಾಳುಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖರೀದಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅಂದಾಜು 44539 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಕಾಳು ಬಿತ್ತನೆಯಾಗಿದ್ದು,44539 ಟನ್ ಉತ್ಪಾದನೆಯ ನಿರೀಕ್ಷೆಯಿದೆ.

    20 ರಿಂದ ಮಾರ್ಚ್ 31ರ ವರೆಗೆ 45 ದಿನಗಳ ಕಾಲ ಕಡಲೆಕಾಳು ಮಾರಾಟದ ನೋಂದಣಿಗೆ ಅವಕಾಶವಿದೆ. 20ರಿಂದ ಮೇ 15 ರವರೆಗೆ ಖರೀದಿ ನಡೆಯಲಿದೆ. ರೈತರು ಫ್ರೂಟ್ಸ್ ದತ್ತಾಂಶ ಮಾಹಿತಿ ಹಾಗೂ ಆಧಾರ ಕಾರ್ಡ್ ಮಾಹಿತಿಯೊಂದಿಗೆ ಪ್ರತಿ ಎಕರೆಗೆ 4 ಕ್ವಿಂ ಟಾಲ್‌ನಂತೆ ಗರಿಷ್ಠ 15 ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಕಡಳೆಕಾಳು ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಬಹುದು.

    ನಿಗದಿ ಪಡಿಸಿದ ದಿನದಂದು ಕೇಂದ್ರಗಳಿಗೆ ಕಡಲೆ ಕಾಳುಗಳನ್ನು ತಂದು ಮಾರಾಟ ಮಾಡಬಹುದು. ವಿಳಂಬವಾಗದಂತೆ ನೋಂದಣಿಯೊಂದಿಗೆ ಖರೀದಿಸಬೇಕು. ನಿತ್ಯ ಗೋದಾಮಿಗೆ ಸಾಗಿಸಬೇಕು. ಹಮಾಲಿ ಕೆಲಸದವರಿಗೆ ಆಯಾ ದಿನದಂದೇ ಕೂಲಿ ನೀಡಬೇಕು. ಉಗ್ರಾಣ ಸಂಸ್ಥೆ ದಾಸ್ತಾನು ಪಡೆದ ಕಡಲೆಕಾಳಿಗೆ ರಶೀದಿ ನೀಡಬೇಕು. ಯಾವುದೇ ದುರುಪಯೋಗ ಹಾಗೂ ರೈತರಿಂದ ದೂರು ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದರು.
    ಖರೀದಿ ಕೇಂದ್ರಗಳ ಮಾಹಿತಿ
    ಚಿತ್ರದುರ್ಗ ತಾಲೂಕು ಚಿತ್ರದುರ್ಗ ಟೌನ್ ಸಹಕಾರ ಸಂಘ,ಮಾಡನಾಯಕನಹಳ್ಳಿ,ಚಿಕ್ಕಗೊಂಡನಹಳ್ಳಿ ಸಹಕಾರಿ ಸಂಘ ಹಾಗೂ ತುರುವನೂರಿನ ಶ್ರೀ ಮಂಜುನಾಥ ಸ್ವಾಮಿ ರೈತ ಉತ್ಪಾದಕರ ಕಂಪನಿ.

    ಚಳ್ಳಕೆರೆ-ರಾಮಜೋಗಿಹಳ್ಳಿ,ಚಿಕ್ಕಮಧುರೆ ಸಹಕಾರ ಸಂಘ,ಹಿರಿಯೂರು-ಟಿ.ಎ.ಪಿ.ಸಿ.ಎಂ.ಸಿ ಐಮಂಗಲ,ಬಬ್ಬೂರು ಹಾಗೂ ಮರಡಿಹಳ್ಳಿ ಸಹಕಾರ ಸಂಘಗಳು,ಹೊಳಲ್ಕೆರೆ-ರಾಮಗಿರಿ ಸಹಕಾರ ಸಂಘ,ಹೊಸದುರ್ಗ-ಹೊಸದುರ್ಗ ರೋಡ್ ಸಹಕಾರ ಸಂಘ, ಮೊಳಕಾಲ್ಮೂರಿನ ಟಿ.ಎ.ಪಿ.ಸಿ.ಎಂ.ಸಿ ಸಹಕಾರ ಸಂಘಗಳಲ್ಲಿ ಕಡಲೆ ಕಾಳು ಖರೀದಿಸಲಾಗುವುದು. ರೈತರಿಗೆ ಡಿ.ಬಿ.ಟಿ ಮೂಲಕ ಹಣ ಜಮಾ ಆಗಲಿದೆ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್‌ಕುಮಾರ್,ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್,ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೆಶಕ ಎಸ್.ಎನ್.ಪತ್ತಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts