ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಿಷಬ್ ಶೆಟ್ಟಿ ರಚನೆ-ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿ ಬಂದಿರುವ ‘ಕಾಂತಾರ’ಕ್ಕೆ ದೇಶ ಮಾತ್ರವಲ್ಲದೆ, ವಿದೇಶಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸೂಪರ್ಸ್ಟಾರ್ ರಜನಿಕಾಂತ್ ಕೂಡ ಈ ಸಿನಿಮಾ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚು, ಹೊಂಬಾಳೆ ಫಿಲ್ಮ್ಸ್ ಬಿಟ್ಟು ಬೇರೆ ಯಾರೂ ಇದನ್ನು ಇಷ್ಟು ಸಮರ್ಥವಾಗಿ ಸಿನಿಮಾದಲ್ಲಿ ಹೇಳಲು ಸಾಧ್ಯವಾಗುತ್ತಿರಲಿಲ್ಲ ಎಂದು ‘ಕಾಂತಾರ’ ನಿರ್ಮಾಣದ ಬಗ್ಗೆ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬರಹಗಾರ, ನಿರ್ದೇಶಕ, ನಾಯಕ ಆಗಿ ನೀವು ಸಿನಿಮಾದಲ್ಲಿ ಮೈನವಿರೇಳಿಸುವ ಅನುಭವ ಮೂಡಿಸಿದ್ದೀರಿ. ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್ಪೀಸ್, ಈ ಚಿತ್ರತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದು ರಜನಿಕಾಂತ್ ‘ಕಾಂತಾರ’ವನ್ನು ಪ್ರಶಂಸಿದ್ದಾರೆ.
ರಸ್ತೆ ತುಂಬಾ ರಾಶಿ ರಾಶಿ ಮೀನು; ಹೊತ್ತು ಸಾಗುತ್ತಿದ್ದ ಲಾರಿಯೇ ಪಲ್ಟಿ!