More

    ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆ ಯತ್ನ, 8 ವರ್ಷದ ಪುತ್ರಿ ಮೃತ್ಯು

    ಈಶ್ವರಮಂಗಲ: ನಿಡ್ಪಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಮಹಿಳೆಯೊಬ್ಬರು ಜ್ಯೂಸ್‌ನಲ್ಲಿ ವಿಷ ಬೆರೆಸಿ ತನ್ನಿಬ್ಬರು ಮಕ್ಕಳಿಗೆ ಕುಡಿಸಿ ಬಳಿಕ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ 8 ವರ್ಷದ ಪುತ್ರಿ ಮೃತಪಟ್ಟಿದ್ದಾಳೆ. ಅಮ್ಮ ಹಾಗೂ 10ರ ಹರೆಯದ ಮಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.
    ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ್ ಎಂಬುವರ ಪತ್ನಿ ದಿವ್ಯಶ್ರೀ(29) ತನ್ನ ಇಬ್ಬರು ಮಕ್ಕಳಾದ ಅಜಯ್(10) ಹಾಗೂ ಅನ್ವಿತಾ(8)ಗೆ ಜ್ಯೂಸ್‌ನಲ್ಲಿ ವಿಷಬೆರೆಸಿ ನೀಡಿದ್ದು, ಬಳಿಕ ತಾನೂ ಅದನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದವರು. ಘಟನೆಯಲ್ಲಿ ಅನ್ವಿತಾ ಮೃತಪಟ್ಟಿದ್ದಾಳೆ.

    ಘಟನೆ ವಿವರ: ಸಜಂಕಾಡಿ ನಿವಾಸಿ ರಘುನಾಥ್‌ಗೆ ಬೇರೊಂದು ಮಹಿಳೆ ಜತೆ ಅನುಮಾನಾಸ್ಪದ ಸಂಬಂಧವಿದೆ ಎಂದು ಆರೋಪಿಸಿ ತನ್ನಿಬ್ಬರು ಮಕ್ಕಳೊಂದಿಗೆ ಪತ್ನಿ ದಿವ್ಯಶ್ರೀ ಮಾರ್ಚ್‌ನಲ್ಲಿ ಸಜಂಕಾಡಿ ಮನೆ ತೊರೆದು ಸಂಬಂಧಿ ನಿಡ್ಪಳ್ಳಿ ಗ್ರಾಮದ ದೇವಸ್ಯ ನಿವಾಸಿ ತುಂಗ ಎಂಬುವರ ಮನೆಗೆ ಬಂದಿದ್ದರು. ಈ ನಡುವೆ ಮಾನಸಿಕವಾಗಿ ನೊಂದ ದಿವ್ಯಶ್ರೀ ಸೆ.16ರಂದು ಮಕ್ಕಳಿಗೆ ವಿಷ ನೀಡಿ, ತಾನೂ ಕುಡಿದು ಅದೇ ದಿನ ಮಂಗಳೂರಿನಲ್ಲಿರುವ ಮತ್ತೋರ್ವ ಸಂಬಂಧಿ ಮಮತಾ ಎಂಬುವರ ಮನೆಗೆ ಹೋಗಿದ್ದರು. ಸೆ.18ರಂದು ಮೂವರೂ ಅಸ್ವಸ್ಥಗೊಂಡಾಗ, ವಿಷ ಸೇವಿಸಿರುವ ಬಗ್ಗೆ ದಿವ್ಯಶ್ರೀ ಮಾಹಿತಿ ನೀಡಿದ್ದರು. ತಕ್ಷಣ ಅವರನ್ನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ 19ರಂದು ರಾತ್ರಿ ಚಿಕಿತ್ಸೆ ಫಲಿಸದೆ ಅನ್ವಿತಾ ಮೃತಪಟ್ಟಿದ್ದರೆ, ದಿವ್ಯಶ್ರೀ ಹಾಗೂ ಪುತ್ರ ಅಜಯ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತುಂಗಾ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
    ಮಕ್ಕಳಿಗೆ ವಿಷ ಉಣಿಸಿ, ಆತ್ಮಹತ್ಯೆಗೆ ಯತ್ನಿಸಿದ ಆಪಾದನೆಯಡಿ ತಾಯಿ ಮತ್ತು ಪತ್ನಿಗೆ ಕಿರುಕುಳ ನೀಡಿದ ಆಪಾದನೆಯಡಿ ಪತಿ ರಘುನಾಥ್ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts