More

    ಕ್ಷೇತ್ರ ಅಭಿವೃದ್ಧಿಗಾಗಿ ಸ್ಪರ್ಧೆ:ರುಕ್ಮಿಣಿ

    ಕೊಪ್ಪಳ: ಕ್ಷೇತ್ರ ಅಭಿವೃದ್ಧಿ ದೃಷ್ಟಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವೆ. ಜನರಿಂದ ಉತ್ತಮ ಬೆಂಬಲ ದೊರೆಯುತ್ತಿದೆ ಎಂದು ಕೊಪ್ಪಳ ಲೋಕಸಭಾ ಪಕ್ಷೇತರ ಅಭ್ಯರ್ಥಿ ರುಕ್ಮಿಣಿ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

    ಕೊಪ್ಪಳದಲ್ಲಿ ನೀರಾವರಿ ಅಭಿವೃದ್ಧಿ, ಶಿಕ್ಷಣ, ಪ್ರವಾಸೋದ್ಯಮ ಬೆಳವಣಿಗೆ ಅವಶ್ಯವಿದೆ. ರಾಷ್ಟ್ರೀಯ ಪಕ್ಷಗಳು ತಮ್ಮ ತಮ್ಮ ಅಜೆಂಡಾ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿವೆ. ಆದರೆ, ಸ್ಥಳಿಯವಾಗಿ ಇರುವ ಸಮಸ್ಯೆಗಳನ್ನು ಗಂಭೀರವಾಗಿ ತೆಗದುಕೊಂಡಿಲ್ಲ. ನಾನು ಹಲವಾರು ಜನರನ್ನು ಭೇಟಿ ಮಾಡಿರುವೆ. ಅವರಿಗೆ ಏನು ಅಗತ್ಯ ಎಂದು ಕೇಳಿ ತಿಳಿದುಕೊಂಡಿರುವೆ. ಈಬಗ್ಗೆ 100ಕ್ಕೂ ಹೆಚ್ಚು ಪ್ರಮುಖ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸಿದ್ಧಪಡಿಸಿಕೊಂಡಿರುವೆ. ಜನರು ಆಶೀರ್ವಾದ ಮಾಡಿದಲ್ಲಿ ಅವುಗಳನ್ನು ಜಾರಿ ಮಾಡುವ ಬಯಕೆ ಇದೆ. ಮತದಾರರು ಸಾಂಪ್ರದಾಯಿಕ ಪಕ್ಷಗಳಿಗೆ ಜೋತು ಬೀಳದೆ ಉತ್ತಮ ಯೋಜನೆ ಹಾಕಿಕೊಂಡಿರುವ ನಮ್ಮಂಥವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

    ಸಾಧ್ಯವಾದಷ್ಟು ಜನರನ್ನು ತಲುಪಲು ಪ್ರಯತ್ನಿಸಿರುವೆ. ನನಗೆ ನನ್ನ ಕುಟುಂಬದವರು ಬೆನ್ನೆಲುಬಾಗಿ ನಿಂತಿದ್ದಾರೆ. ನಾನು ್ಯಾಷನ್​ ಡಿಸೈನರ್​ ಆಗಿದ್ದು, ಪದವೀದರೆಯಾಗಿರುವೆ. ಬಳ್ಳಾರಿ ಮೂಲದವಳಾಗಿದ್ದು, ಕೊಪ್ಪಳ ಸಾಮಾನ್ಯ ಕ್ಷೇತ್ರವಾಗಿರುವ ಕಾರಣ ಇಲ್ಲಿ ಸ್ಪರ್ಧೆ ಮಾಡಿರುವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts