ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜನವರಿ 27 ಹಾಗೂ 28ರಂದು ಫಿನಾಲೆ ನಡೆಯಲಿದ್ದು, ಜನವರಿ 20 ಹಾಗೂ 21ರಂದು ನಿರೂಪಕ ಕಿಚ್ಚ ಸುದೀಪ್ ತಮ್ಮ ಕೊನೆಯ ಪಂಚಾಯಿತಿಯನ್ನು ನಡೆಸಲಿದ್ದಾರೆ.
ಟಾಸ್ಕ್ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ಭಾನುವಾರ ನಟ ಕಿಚ್ಚ ಸುದೀಪ್ ನಡೆಸಿ ಕೊಡುವ ಸೂಪರ್ ಸಂಡೇ ವಿತ್ ಸುದೀಪದಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಾರೆ. ಅದೇ ರೀತಿ ದೊಡ್ಮನೆಯಲ್ಲಿರುವ ಸ್ಫರ್ಧಿಗಳು ತಪ್ಪು ಮಾಡಿದರೆ ನಿರೂಪಕ ಕಿಚ್ಚ ಸುದೀಪ್ ಅವರಿಗೆ ಕ್ಲಾಸ್ ತೆಗೆದುಕೊಂಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.
ಅದೇ ರೀತಿ ಎಲಿಮಿನೇಟ್ ಆಗಿ ಹೋದವರು ಹಾಗೆ ಮಾಡಿದರೆ ಅಂಥವರ ಬಗ್ಗೆ ನಿರೂಪಕ ಕಿಚ್ಚ ಸುದೀಪ್ ಮಾತನಾಡಿರುವುದು ತುಂಬಾ ಕಡಿಮೆ. ಬಿಗ್ಬಾಸ್ನಿಂದ ಹೊರಬಂದ ಬಳಿಕ ರಕ್ಷಕ್ ಬುಲೆಟ್ ಕೆಲವು ಕಡೆಗಳಲ್ಲಿ ನೀಡಿದ ಸಂದರ್ಶನದಲ್ಲಿ ಆಡಿದ ಮಾತುಗಳು ಟೀಕೆಗೆ ಒಳಗಾಗಿವೆ. ಅದರಲ್ಲೂ ಕಿಚ್ಚ ಸುದೀಪ್ ಬಗ್ಗೆ ಆಡಿರುವ ಮಾತುಗಳಿಗೆ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಕ್ ಕ್ಷಮೆಯಾಚಿಸಿದ್ದರು.
ಇದನ್ನೂ ಓದಿ: ದಾಖಲೆ ಮೊತ್ತಕ್ಕೆ ಐಪಿಎಲ್ ಪ್ರಾಯೋಜಕತ್ವ ಉಳಿಸಿಕೊಂಡ ಟಾಟಾ ಗ್ರೂಪ್ಸ್
ಬಿಗ್ಬಾಸ್ ಮನೆಯಲ್ಲಿ ಈ ವಾರ ಮಹತ್ವದ ಸಂಗತಿಗಳು ನಡೆದಿದ್ದು, ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದ ಸ್ಫರ್ಧಿಗಳು ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಆದರೆ, ತಮಗೆ ಸಿ್ಕಕ ಅವಖಾಶವನ್ನು ರಕ್ಷಕ್ ಹಾಗೂ ಈಶಾನಿ ಸರಿಯಾಗಿ ಉಪಯೋಗಿಸಿಕೊಂಡಿಲ್ಲ ಎಂದು ಹಲವರು ದೂರಿದ್ದು, ಬಿಗ್ಬಾಸ್ ಮನೆಯಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಮನೆಯಿಂದ ಎಲಿಮಿನೇಟ್ ಆದವರ ಬೆಡ್ಶೀಟ್ಗಳೆಲ್ಲವೂ ವಿನಯ್ ಅವರ ಬೆಡ್ ಸೇರುತ್ತಿವೆ ಎಂದು ಡ್ರೋನ್ ಪ್ರತಾಪ್ ಈ ಹಿಂದೆ ಹೇಳಿಕೆ ನೀಡಿದ್ದರು. ಪ್ರತಾಪ್ ಹೇಳಿಕೆಯನ್ನು ಇಟ್ಟುಕೊಂಡು ರಕ್ಷಕ್ ಮಾತಿನ ಜಗಳಕ್ಕೆ ಮುಂದಾಗಿದ್ದರು. ಇದರಿಂದ ಡ್ರೋನ್ ಪ್ರತಾಪ್ ಕಿರಿಕಿರಿಯನ್ನು ಅನುಭವಿಸಿದ್ದರು. ಬಳಿಕ ಈಶಾನಿ ಪ್ರತಾಪ್ ಅವರನ್ನು ಕಾಗೆ ಎಂದು ಕರೆದಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ ಕಿಚ್ಚ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಆ ಸ್ಪರ್ಧಿ ಹೆಸರು ರಕ್ಷಕ್ ಅಲ್ವಾ, ರಕ್ಷಕ್ ಅವರಿಂದ ಇನ್ನೊಂದು ಬ್ಲಾಂಕೆಟ್ ಬರತ್ತೆ. ರಕ್ಷಕ್ ಅವರೇ.. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. ಯಾವ ಆ್ಯಂಗಲ್ನಲ್ಲಿ ನೀವು ಸೋತು ಹೊರಗಡೆ ಹೋಗಿ, ಕಲಿತು ಒಳಗೆ ಬಂದ್ರಿ ಅಂತ ನಿಮಗೆ ಅನಿಸುತ್ತೆ ಹೇಳಿ ಎಂದು ರಕ್ಷಕ್ ಹಾಗೂ ಈಶಾನಿಗೆ ಕಿಚ್ಚ ಸುದೀಪ್ ಖಡಕ್ ತಿರುಗೇಟು ನೀಡಿದ್ದಾರೆ.