More

    ಮಾತು ಮುಗಿಸಿದ ವಿಕ್ರಾಂತ್ ರೋಣ; ಅನುಭವ ಹಂಚಿಕೊಂಡ ಕಿಚ್ಚ ಸುದೀಪ್​..

    ಬೆಂಗಳೂರು: ಅನೂಪ್​ ಭಂಡಾರಿ ನಿರ್ದೇಶನ, ಕಿಚ್ಚ ಸುದೀಪ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಅದ್ಧೂರಿ ಸಿನಿಮಾ ವಿಕ್ರಾಂತ್ ರೋಣ ಕುರಿತು ಸಿನಿಮಾಪ್ರಿಯರು, ಅದರಲ್ಲೂ ಸುದೀಪ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈಗ ತಮ್ಮ ಸಿನಿಮಾ ಕುರಿತು ಸುದೀಪ್ ಅನುಭವ ಹಂಚಿಕೊಂಡಿದ್ದು, ಅಭಿಮಾನಿಗಳ ಕಾತರ-ಕೌತುಕವನ್ನು ಮತ್ತಷ್ಟು ಹೆಚ್ಚಿಸಿದೆ.

    ವಿಕ್ರಾಂತ್ ರೋಣ ಸಿನಿಮಾದ ವಾಯ್ಸ್ ಡಬ್ಬಿಂಗ್​ ಇಂದು ಮುಗಿಸಿದೆ. ಅದೊಂದು ಅದ್ಭುತ ಅನುಭವ, ಪಾತ್ರದೆಡೆಗೊಂದು ಹೊಸ ಸ್ಪಂದನೆ ಎಂದು ಡಬ್ಬಿಂಗ್ ಅನುಭವ ಹೇಳಿಕೊಂಡಿರುವ ಸುದೀಪ್, ಚಿತ್ರದ 3ಡಿ ಆವೃತ್ತಿಯ ಕೆಲವು ತುಣುಕುಗಳನ್ನು ವೀಕ್ಷಿಸಿರುವುದಾಗಿಯೂ ತಿಳಿಸಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಆಗಿ ಜೀವ ಪಡೆಯುತ್ತಿರುವುದನ್ನು ನೋಡಿ ಥ್ರಿಲ್ ಆಗುತ್ತಿದ್ದು, ಸದ್ಯದಲ್ಲೇ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಲಿರುವುದಾಗಿಯೂ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

    ಇದು 3ಡಿ ಫ್ಯಾಂಟಸಿ ಆ್ಯಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಇದರಲ್ಲಿ ಸುದೀಪ್ ಜತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶಾಲಿನಿ ಜಾಕ್​ ಮಂಜು, ಅಲಂಕಾರ್ ಪಾಂಡ್ಯನ್ ನಿರ್ಮಾಣದ ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನವಿದೆ. ಈ ಚಿತ್ರವನ್ನು ಆಗಸ್ಟ್ 19ರಂದು ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದೆ ಸಿನಿತಂಡ.

    ರೆಟ್ರೋ ಲುಕ್​ನಲ್ಲಿ ಉಪ್ಪಿ-ಕಿಚ್ಚ; ಜು. 10ರಿಂದ ಕಬ್ಜ ಶೂಟಿಂಗ್

    ನೀವೂ ಕಣ್ತುಂಬಿಸಿಕೊಳ್ಳಬಹುದು ಸರ್ಜಾ ಕುಟುಂಬ ನಿರ್ಮಿಸಿರುವ ಆಂಜನೇಯ ದೇವಸ್ಥಾನದ ಕುಂಭಾಭಿಷೇಕ..

    ಪ್ರೀತಿಯಿಂದ ಸಾಕಿದ್ದ ನಾಯಿಯ ನಿಧನಕ್ಕೆ ಕಣ್ಣೀರು ಹಾಕಿದ ನಟಿ ಹರಿಪ್ರಿಯಾ

    ಪ್ರಜ್ವಲ್ ಹುಟ್ಟುಹಬ್ಬಕ್ಕೆ PD 35 ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts