ರಾಯಬಾಗ: ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲು ಇನ್ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್ ಕಾಲೇಜ್ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಸ್ಪಿಎಂ ಚೇರ್ಮನ್, ಮಾಜಿ ಸಂಸದ ಅಮರಸಿಂಹ ಪಾಟೀಲ ಹೇಳಿದರು.
ಪಟ್ಟಣದ ಎಸ್ಪಿಎಂ ಕಾಲೇಜ್ನಲ್ಲಿ ನೂತನವಾಗಿ ಪ್ರಾರಂಭಿಸಿದ ನರ್ಸಿಂಗ್ ಕಾಲೇಜ್ ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, 2023-24ನೇ ಸಾಲಿನ ಪ್ರಥಮ ಬ್ಯಾಚ್ ಪ್ರಾರಂಭಗೊಂಡಿದ್ದು, ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ದೂರದ ಗ್ರಾಮಗಳ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯದ ಸೌಲಭ್ಯ ಇದೆ. ನರ್ಸಿಂಗ್ ಕೋರ್ಸ್ಗೆ ಬೇಕಾದ ಎಲ್ಲ ಸೌಕರ್ಯ ಒದಗಿಸಲಾಗಿದೆ ಎಂದರು.
ಸಂಸ್ಥೆ ನಿರ್ದೇಶಿಕಿ ಭಾಗ್ಯಶ್ರೀ ಪಾಟೀಲ, ಡಾ.ಎಸ್.ಎಸ್.ಬಾನೆ, ಪ್ರಾಚಾರ್ಯ ಜೆ.ಜೆ.ನಾಗರಾಜ, ಎಸ್.ಎಸ್.ಶಿಂಗಾಡಿ, ಎಸ್.ಪಿ.ಕಾಂಬಳೆ, ಪಿ.ಎಂ.ಭೆಂಡೆ, ಎಸ್.ಎ್.ಕುರಳೆ ಇದ್ದರು.