More

    ವಿದ್ಯಾರ್ಥಿ ಜೀವನದಲ್ಲಿ ಕಾಲಕಳೆಯದಿರಿ

    ಸಿದ್ದಾಪುರ: ವಿದ್ಯಾರ್ಥಿ ಜೀವನದ ಕಾಲಘಟ್ಟ ಅಮೂಲ್ಯವಾದದ್ದು, ಸಮಯ ವ್ಯರ್ಥ ಮಾಡದೆ ಅಭ್ಯಸದತ್ತ ಗಮನಹರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಮುಖ್ಯಶಿಕ್ಷಕ ಎಸ್.ಎಲ್.ಪ್ರಕಾಶ್ ಹೇಳಿದರು.

    ಇದನ್ನೂ ಓದಿ: ರೆಡ್ ರಿಬ್ಬನ್ ಮ್ಯಾರಾಥಾನ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

    ಸಮೀಪದ ಬೆನ್ನೂರು ಗ್ರಾಮದ ಸಹಿಪ್ರಾ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಮಹಮ್ಮದ್ ರಸೂಲ್, ಮಲಂಗ್ ಸಾಬ್, ರೋಹಿತ್ ಕುಮಾರ್ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಸಂಬಂಧ ಪೋಷಕ ಮಗುವಿನ ಸಂಬಂಧದಂತಿರುತ್ತದೆ. ಒಬ್ಬ ಸಹೋದ್ಯೋಗಿ ವರ್ಗವಾದಾಗ ಮನಸಿಗೆ ಬಹಳ ದುಃಖವಾಗುತ್ತದೆ. ಆದರೆ, ವರ್ಗಾವಣೆ ಅನಿವಾರ್ಯವಾಗಿದೆ.

    ವಿದ್ಯಾರ್ಥಿಗಳ ಏಳಿಗೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ವಿರೇಶ ನಾಯಕ, ಸ್ಥಳೀಯರಾದ ಬಸವರಾಜ ದರೋಜಿ, ಚಿದಾನಂದಪ್ಪ, ಮಂಜುನಾಥ ಕಂಪ್ಲಿ, ಕುಮಾರ್, ಶಿಕ್ಷಕರಾದ ವಿಠಲ್ ಜೀರಗಾಳಿ, ಪರುಶುರಾಮ ಗಡ್ಡಿ, ಶಾಂತಾದೇವಿ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts