ಹೈದರಾಬಾದ್: ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೈದರಾಬಾದ್ನ ಬೆಗುಂಪೇಟ್ ಮೆಟ್ರೋ ನಿಲ್ದಾಣದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತನನ್ನು ಮಂಜುನಾಥ್ (23) ಎಂದು ಗುರುತಿಸಲಾಗಿದ್ದು, ಖಿನ್ನತೆಯ ಬಳಲುವಿಕೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಈತ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ರಾಮಚಂದ್ರನಗರದ ನಿವಾಸಿ. ಚಾರ್ಟೆಡ್ ಅಕೌಂಟೆಂಟ್ ಓದುತ್ತಿದ್ದ ಮಂಜುನಾಥ್ ಅನೇಕ ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುನಾಥ್ ಕಾಣೆಯಾಗಿರುವ ಬಗ್ಗೆ ಅವರ ಸಹೋದರ ಗೋವರ್ಧನ್ ನಗರಕ್ಕೆ ಆಗಮಿಸಿ ದೂರು ದಾಖಲಿಸಿದ್ದ. ಇದರ ನಡುವೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಂಜುನಾಥ್ ಸಾವಿಗೂ 4 ದಿನಗಳ ಹಿಂದಷ್ಟೇ ಕುಟುಂಬದ ಸಂಪರ್ಕಕ್ಕೆ ಬಂದಿದ್ದ. ಹಾಸ್ಟೆಲ್ ಮಾಲೀಕರಿಗೆ ಫೋನ್ ಮಾಡಿ ಸಹೋದರನ ಬಗ್ಗೆ ವಿಚಾರಿಸಿದ್ದಾಗ ಆತ ನಾಲ್ಕು ದಿನಗಳಿಂದ ಪತ್ತೆಯಿಲ್ಲ ಎಂಬ ಮಾಹಿತಿ ತಿಳಿದಿತ್ತು. ಆ ಬಳಿಕವೇ ಗೋವರ್ಧನ್ ನಾಪತ್ತೆ ದೂರು ನೀಡಿದ್ದರು. ಇದೀಗ ಮಂಜುನಾಥ್ ಶವವಾಗಿ ಪತ್ತೆಯಾಗಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. (ಏಜೆನ್ಸೀಸ್)
ಬಳ್ಳಾರಿ ಸರ್ಕಾರಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿ ಜತೆ ಅಧಿಕಾರಿಯ ರೋಮ್ಯಾನ್ಸ್: ವಿಡಿಯೋ ವೈರಲ್!