ವಿಜಯವಾಡ: ಈತ ಯಾವುದೇ ಉದ್ಯಮಿಯು ಅಲ್ಲ, ರಿಯಲ್ ಎಸ್ಟೇಟ್ ಏಜೆಂಟ್ ಅಂತೂ ಅಲ್ಲವೇ ಅಲ್ಲ, ತಳ್ಳೋ ಗಾಡಿಯಲ್ಲಿ ಬಾಳೆಹಣ್ಣು ತುಂಬಿಕೊಂಡು ಮಾರಾಟ ಮಾಡುವ ಈತ ಮಾಡಿರುವ ಕೆಲಸವೊಂದು ನೋಡಿದರೆ ಎಲ್ಲರ ಹುಬ್ಬೇರುವುದಂತೂ ಖಂಡಿತ.
ವಿವಿರಣೆಗೆ ಬರುವುದಾದರೆ, ಇದುವರೆಗೂ ನಾನು ಹೇಳಿದ್ದು ಆಂಧ್ರಪ್ರದೇಶದ ನೆಲ್ಲೋರ್ ಜಿಲ್ಲೆಯ ಬುಚಿರೆಡ್ಡಿಪಾಳ್ಯಂ ನಿವಾಸಿ ಎಸ್.ಕೆ. ಜೈಲಾನಿ ಕುರಿತು. ಹೌದು, ಸಾಮಾನ್ಯ ಬಾಳೆಹಣ್ಣು ವ್ಯಾಪಾರಿ ಈ ಕೆಲಸ ಮಾಡಬಹುದಾ ಎಂಬ ಪ್ರಶ್ನೆ ಈ ವರದಿ ಓದಿದ ಬಳಿಕ ಮೂಡುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿರಿ: ಕರೊನಾ ಬಂದಿದ್ದಕ್ಕೆ ಇಡೀ ಗ್ರಾಮಸ್ಥರು ಈ ಹುಡುಗಿ ಜತೆ ನಡೆದುಕೊಂಡ ರೀತಿ ನಾಚಿಕೆ ಹುಟ್ಟಿಸುವಂತಿದೆ..!
ನೆಲ್ಲೊರ್ನ ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹಾಗೂ ಬಸ್ ನಿಲ್ದಾಣದ ಹತ್ತಿರವಿರುವ ಶಾಪಿಂಗ್ ಕಾಂಪ್ಲೆಕ್ಸ್ ಒಂದರಲ್ಲಿ ಸುಮಾರು 40 ವರ್ಷಗಳಿಂದ ಜೈಲಾನಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದಾರೆ. ಹೀಗಿರುವಾಗ ಇತ್ತೀಚೆಗೆ ಅದರ ಮಾಲೀಕ ಹಳೆಯ ಕಟ್ಟಡವನ್ನೆಲ್ಲ ಒಡೆದು ಹೊಸ ವಾಣಿಜ್ಯ ಮಳಿಗೆ ಸ್ಥಾಪಿಸಲು ಮುಂದಾದರು. ಈ ವಿಚಾರ ಜೈಲಾನಿಗೆ ತಿಳಿಯುತ್ತದೆ.
ಕಾಂಪ್ಲೆಕ್ಸ್ ಧ್ವಂಸ ಮಾಡಿದರೆ ನನ್ನ ಗತಿ ಏನು ಎಂದು ಜೈಲಾನಿ ಚಿಂತಿಸುತ್ತಾರೆ. ಒಂದು ವೇಳೆ ಅಲ್ಲಿಂದ ಓಡಿಸಿದರೆ ವ್ಯಾಪಾರದ ಮೇಲೆ ಪರಿಣಾಮ ಬೀರುವುದಲ್ಲದೆ ನನ್ನ ಜೀವನವು ಹಾಳಾಗುತ್ತದೆ ಎಂದು ಕೊರಗುವ ಜೈಲಾನಿ, ಅದೇ ಕಾಂಪ್ಲೆಕ್ಸ್ ಒಂದಿಷ್ಟು ಜಾಗವನ್ನು ಸ್ವಂತಕ್ಕೆ ಖರೀದಿಸುವ ನಿರ್ಧಾರಕ್ಕೆ ಬರುತ್ತಾರೆ.
ಇದನ್ನೂ ಓದಿರಿ: ಮಂಗಳೂರು ಕೊರಗಜ್ಜ ಕ್ಷೇತ್ರ ಮಾಲಿನ್ಯ ಮಾಡಿದ ಓರ್ವನ ಸಾವು ಇಬ್ಬರಿಂದ ತಪ್ಪು ಕಾಣಿಕೆ
ಅದರಂತೆ ಬುಧವಾರ (ಮಾರ್ಚ್ 31) ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬರೋಬ್ಬರಿ 1.20 ಕೋಟಿ ರೂಪಾಯಿಗೆ 108 ಚದರ ಅಡಿ ಜಾಗವನ್ನು ಖರೀದಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಜೈಲಾನಿ ಇಷ್ಟೊಂದು ಹಣವನ್ನು ಹೇಗೆ ಸಂಪಾದಿಸಿದರು ಎಂಬುದೇ ಇದೀಗ ಎಲ್ಲರ ತಲೆಯಲ್ಲಿ ಓಡುತ್ತಿರುವ ಪ್ರಶ್ನೆಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಉತ್ತರ ನೀಡಬೇಕಿದೆ. ಆದರೆ, ಅವರ ಕೆಲಸ ಮಾತ್ರ ಇದೀಗ ನೆಲ್ಲೋರ್ ಜಿಲ್ಲೆಯ ಜನರ ಬಾಯಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್)
ಬೆಂಗಳೂರಿನಲ್ಲಿ 6ರಿಂದ 9ನೇ ತರಗತಿ ಭೌತಿಕ ತರಗತಿ ಸ್ಥಗಿತ! ಆದೇಶ ಹೊರಡಿಸಿದ ಶಿಕ್ಷಣ ಸಚಿವ
ವಿಜಯವಾಣಿ ದಶಕದ ಯಶೋಗಾಥೆಗೆ ಶ್ಲಾಘನೆ ಅಭಿನಂದನೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ