More

    ರಾಜ್ಯ ಮಟ್ಟದ ಆಪ್ತ ಸಮಾಲೋಚಕರ ಕಾರ್ಯಾಗಾರ

    ಗದಗ: ಹದಿಹರೆಯದ ಮಕ್ಕಳಲ್ಲಾಗುವ ದೈಹಿಕ ಬದಲಾವಣೆ ಮತ್ತು ಮಾನಸಿಕ ಭಾವನೆಗಳ ಬದಲಾವಣೆಯೂ ವಯೋಸಹಜ ಎನ್ನುವುದನ್ನು ಅರ್ಥೈಸಿ,ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸಿಸುವುದೇ ಈ ಕಾರ್ಯಕ್ರಮದ ಉದ್ದೇಶವೆಂದು ಆರ್.ಬಿ.ಎಸ್.ಕೆ ಮತ್ತು ಆರ್.ಕೆ.ಎಸ್.ಕೆ. ಉಪನಿರ್ದೇಶಕರಾದ ಡಾ.ವೀಣಾ ರವರು ತಿಳಿಸಿದರು.

    ನಗರದ ಪ.ಭೀಮಸೇನ ಜೋಶಿ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರದಂದು ಗದಗ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ‘ಸಮಾಲೋಚನಾ ಸಂಗಮ-2’ ರ ರಾಜ್ಯ ಮಟ್ಟದ ಆಪ್ತ ಸಮಾಲೋಚಕರ ಕಾರ್ಯಗಾರವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

    ಮೊಟ್ಟಮೊದಲು 8 ಜಿಲ್ಲೆಗಳಲ್ಲಿ ಪ್ರಾರಂಭವಾದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮವು ಇವತ್ತಿಗೆ 25 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಜರಗುತ್ತಿವೆ.ಎಲ್ಲಾ ಜಿಲ್ಲೆಯ ಆರ್.ಸಿ.ಎಚ್.ಅಧಿಕಾರಿಗಳು,ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ ಎಂದು ಅಭಿನಂದಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಎಸ್.ಎಸ್.ನೀಲಗುಂದ ಮಾತನಾಡಿ, ಮಕ್ಕಳು ತಮ್ಮ ಕಿಶೋರ ವ್ಯವಸ್ಥೆಯಲ್ಲಿ ಎಲ್ಲದರ ಬಗ್ಗೆಯೂ ಕುತೂಹಲದಿಂದಿರುತ್ತಾರೆ. ತಮ್ಮಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗೆ ವಿಚಲಿತಗೊಳ್ಳದೆ  ಮತ್ತು ಧೂಮಪಾನ ಮತ್ತು ಮದ್ಯಪಾನದಂತಹ ವ್ಯಸನಗಳಿಗೆ ಬಲಿಯಾಗದೇ ಉತ್ತಮ ಶಿಕ್ಷಣವನ್ನು ಪಡೆದು ಸಫಲತೆಯನ್ನು ಹೊಂದಿದಾಗ ಇಂತಹ ಕಾರ್ಯಗಾರ ಸಾರ್ಥಕತೆ  ಹೊಂದುತ್ತದೆ ಎಂದು ಹೇಳಿದರು.

    ಡಾ.ಅರುಂಧತಿ.ಕೆ.ಮಾತನಾಡಿ ಸಮಾಲೋಚನಾ ಸಂಗಮ-2,ರಾಜ್ಯ ಮಟ್ಟದ ಆಪ್ತಸಮಾಲೋಚನಾ ಕಾರ್ಯಗಾರವನ್ನು  ನಡೆಸುತ್ತಿರುವುದು ಹೆಮ್ಮೆಯ ಸಂಗತಿ, ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಈ ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

    ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲೆಯ ಆರ್.ಸಿ.ಎಚ್.ಅಧಿಕಾರಿಗಳು, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಮ್.ಎ.ರೆಡ್ಡರ್,ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ,ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts