More

    ಲಾರಿ ಮಾಲೀಕರ ರಾಜ್ಯಮಟ್ಟದ ಸಮಾವೇಶ ಜು.9 ರಂದು

    ವಿಜಯವಾಣಿ ಸುದ್ದಿಜಾಲ ಗದಗ
    ಲಾರಿ ಮಾಲೀಕರ ರಾಜ್ಜಮಟ್ಟದ 32ನೇ ಸಭೆಯನ್ನು ಗದಗ ಜಿಲ್ಲೆಯ ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಜು.9 ರಂದು ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಲಾರಿ ಮಾಲೀಕರ ಸಂದ ರಾಜ್ಯಾಧ್ಯಕ್ಷ ನವೀನ ರೆಡ್ಡಿ ತಿಳಿಸಿದರು.
    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಲಾರಿ ಮಾಲೀಕರ ಸಮಸ್ಯೆಗಳ ಬಗ್ಗೆ ಚಚಿರ್ಸಲಾಗುವುದು. ಹೆದ್ದಾರಿಗಳಲ್ಲಿ ಲಾರಿ ಪಾಕಿರ್ಂಗ್​ ವ್ಯವಸ್ಥೆ. ರ್ಟಮಿನಲ್​ ಗಳ ವ್ಯವಸ್ಥೆ, ಲಾರಿ ಚಾಲಕರಿಗೆ ಹೆದ್ದಾರಿಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಬೇಡಿಕೆಗೆ ಒತ್ತಾಯಿಸಲಾಗುವುದು. ಮುಖ್ಯವಾಗಿ ಆರ್​ಟಿಒ ಗಳಿಂದ ಓವರ್​ ಲೋಡ್​ ದಂಡ ವಿಧಿಸಲಾಗುತ್ತಿದೆ. ಲೋಡ್​ ಮಾಡುವವರಿಗೆ, ಲೋಡ್​ ಇಳಿಸಿಕೊಳ್ಳುವ ಗ್ರಾಹಕರಿಂದ ದಂಡ ವಿಧಿಸುವ ನಿಯಮವಿದ್ದರೂ ದಂಡದ ಭಾರವನ್ನು ಲಾರಿ ಮಾಲೀಕರ ಮೇಲೆ ಹೇರಲಾಗುತ್ತಿದೆ. ಈ ಬಗ್ಗೆ ಚಾಲಕರಿಗೆ ಅರಿವೂ ಮೂಡಿಸಲಾಗುವುದು ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
    ಲಾರಿ ಅಪಘಾತದ ಕುರಿತು ಮಾತನಾಡಿದ ಅವರು, ಸ್ಥಳ ವೀಕ್ಷಣೆ ಮಾಡಿ ಆದಷ್ಟು ಬೇಗ ಲಾರಿಯನ್ನು ಪೊಲೀಸ್​ ಇಲಾಖೆ ಬಿಡುಗಡೆ ಮಾಡಬೇಕು.ಆದರೂ ಕಿರುಕಳ ನೀಡಲಾಗುತ್ತದೆ ಇಂತಹ ಸಮಸ್ಯೆಗಳ ಬಗ್ಗೆ ಚಚಿರ್ಸಲಾಗುವುದು ಎಂದರು.
    ಕಾಮಿರ್ಕ ಇಲಾಖೆಯಿಂದ ಲಾರಿ ಚಾಲಕ ಮತ್ತು ನಿರ್ವಾಹಕರು ವಿಮೆ ಕುರಿತು ಗಮನ ಸೆಳೆಯಲಾಗುವುದು ಎಂದರು.
    ಶ್ರೀನಿವಾಸ ರಾವ, ನಾರಾಯಣ ಪ್ರಸಾದ, ನವೀನ ಅಕ್ಕಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts