ಬೆಂಗಳೂರು: ಕನ್ನಡ ಸಿನಿಮಾಗಳಲ್ಲಿ ಉತ್ತಮ ಒಟಿಟಿ ಕಂಟೆಂಟ್ಗಳಿದ್ದರೂ ಕೂಡ OTT ಪ್ಲ್ಯಾಟ್ಫಾರಂಗಳು ನಮ್ಮ ಚಿತ್ರಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಬಾ.ಮ. ಹರೀಶ್, “ನಾವು ಇದರ ಕುರಿತು ಸಾಕಷ್ಟು ಚರ್ಚೆ ಮಾಡಿದ್ದೇವೆ. ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರು ಒಟಿಟಿಯಲ್ಲಿ ಹೆಚ್ಚಿನ ಕನ್ನಡ ಸಿನಿಮಾಗಳು ಯಾಕೆ ಇಲ್ಲ? ಎಂಬುದನ್ನು ಪ್ರಶ್ನಿಸಿದ್ದೇವೆ. ಕನ್ನಡದಲ್ಲಿ ಒಟಿಟಿ ಕಂಟೆಟ್ ಸಿನಿಮಾಗಳಿದ್ದರೂ ಕಡಗಣನೆ ಮಾಡುತ್ತಿರುವುದು ನಮಗೆ ತೀವ್ರ ಬೇಸರ ತಂದಿದೆ” ಎಂದು ಹೇಳಿದರು.
“ಇದನ್ನು ಗಮನಿಸಿದ ಬಳಿಕ ನಾವೇ ಒಂದು ಒಟಿಟಿ ಪ್ಲ್ಯಾಟ್ಫಾರಂ ತೆರೆಯಲು ಯೋಜನೆ ಮಾಡಿದ್ದೀವಿ. ಆದ್ರೆ, ಕಾರಣಾಂತರಗಳಿಂದ ಅದು ಈವರೆಗೂ ಸಾಧ್ಯವಾಗಿಲ್ಲ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಆಗಮಿಸದೆ ಇರುವುದು ನಮಗೆ ಸಂಕಷ್ಟ ತಂದಿದೆ. ಈಗ ಇದೇ ಪರಿಸ್ಥಿತಿ ಒಟಿಟಿಯಲ್ಲೂ ಎದುರಾಗಿದೆ. ಸ್ಟಾರ್ ಹೀರೋಗಳು ವರ್ಷಕ್ಕೆ 2-3 ಸಿನಿಮಾಗಳು ಮಾಡಿದರೆ ಒಳ್ಳೆಯದು. ಈ ರೀತಿ ಮಾಡಿದರೇ ಮಾತ್ರ ಕನ್ನಡ ಚಿತ್ರರಂಗ ಉಳಿಯಲು ಸಾಧ್ಯ” ಎಂದು ಹೇಳಿದರು.
“ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲಾಗಿ ತೆರೆಯ ಮೇಲೆ ಬರಬೇಕು. ಹಾಗೆ ಮಾಡಿದರೆ ಮಾತ್ರ ನಾವು ಒಟಿಟಿಗಳಿಗೆ ಟಕ್ಕರ್ ಕೊಡಲು ಸಾಧ್ಯ” ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ. ಹರೀಶ್ ಹೇಳಿದ್ದಾರೆ.
ಥೇಟ್ ಪುಷ್ಪ ಸಿನಿಮಾ ಸ್ಟೈಲಲ್ಲೇ ಗಾಂಜಾ ಸರಬರಾಜು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್