ತಿರುವನಂತಪುರಂ: ಯುವತಿಯನ್ನು ಹಿಂಸಿಸಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ, ಬೆಂಕಿಯಿಟ್ಟಿದ್ದ ಆರೋಪಿಗೆ ಕೇರಳ ನ್ಯಾಯಾಲಯ ಜೀವಾವಧಿ ಶಿಕ್ಷೆ ಜತೆಗೆ 5 ಲಕ್ಷ ರೂ. ದಂಡ ವಿಧಿಸಿದೆ.
ನೀತು (22) ಕೊಲೆಯಾದ ಯುವತಿ. 2019ರ ಏಪ್ರಿಲ್ನಲ್ಲಿ ಕೇರಳದ ತಿಸ್ಸೂರ್ನ ಚಿಯರಾಮ್ನಲ್ಲಿರುವ ನೀತು ಮನೆಯಲ್ಲಿ ಘಟನೆ ನಡೆದಿತ್ತು. ವಡಕ್ಕೆಕಾದ್ ನಿವಾಸಿ ಆರೋಪಿ ನಿಧೀಶ್, ನೀತು ಮನೆಗೆ ನುಗ್ಗಿ ಸುಮಾರು 12 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ಶವಕ್ಕೆ ಬೆಂಕಿ ಇಟ್ಟಿಟ್ಟು ಎಸ್ಕೇಪ್ ಆಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.
ಇದನ್ನೂ ಓದಿ: 2 ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಗೆ ಬಲಿಯಾಗಿದ್ದರ ದೇಹ ಪತ್ತೆ; ಶ್ರೀಮಂತ, ಬಡವನ ಜೋಡಿ ಎಂದ ತಜ್ಞರು
ಪ್ರಕರಣ ಸಂಬಂಧ ಇಂದು (ನ. 23) ತೀರ್ಪು ಪ್ರಕಟಿಸಿದ ತಿಸ್ಸೂರ್ ಜಿಲ್ಲೆಯ ಪ್ರಿನ್ಶಿಪಲ್ ಸೆಸ್ಸನ್ ಕೋರ್ಟ್ ನಿಧೀಶ್ಗೆ ಜೀವಾವಧಿ ಶಿಕ್ಷೆ ಜತೆಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ನೀತು ಕೊಡಕರಾದ ಆ್ಯಕ್ಸಿಸ್ ಇಂಜಿನಿಯರ್ ಕಾಲೇಜ್ ವಿದ್ಯಾರ್ಥಿನಿಯಾಗಿದ್ದಳು. ತಾಯಿ ನಿಧನದ ಬಳಿಕ ತಂದೆ ಮತ್ತೊಂದು ಮದುವೆ ಆಗಿದ್ದರಿಂದ ನೀತು ತನ್ನ ಅಜ್ಜಿಯ ಮನೆಯಲ್ಲಿ ವಾಸವಿದ್ದಳು. 27 ವರ್ಷ ನಿಧೀಶ್ ಕೊಚ್ಚಿಯ ಬಿಪಿಓ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ನೀತುವನ್ನು ಪ್ರೀತಿಸುತ್ತಿದ್ದ ಆತ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ. ಆದರೆ, ನೀತುಗೆ ಇಷ್ಟವಿರಲಿಲ್ಲ. ಮದುವೆ ಪ್ರಸ್ತಾವನೆಯನ್ನು ನಿರಾಕರಿಸಿದ ಕೋಪದಲ್ಲಿ ಆರೋಪಿ ನಿಧೀಶ್, ನೀತುವನ್ನು ಕೊಲೆ ಮಾಡಿದ್ದ. (ಏಜೆನ್ಸೀಸ್)
ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಸ್ಲಿಂ ಶಾಸಕ; ಈತ ಜೆಎನ್ಯುನ ಹಳೆಯ ವಿದ್ಯಾರ್ಥಿ