More

    ಸಚಿವರಿದ್ದ ಕಾರ್ಯಕ್ರಮದ ಸ್ಟೇಜ್ ಕುಸಿತ; ನದಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ್ರು ಸಚಿವರು ಮತ್ತಿತರರು..

    ಮಂಗಳೂರು: ಉತ್ಸವವೊಂದರ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆ ದಿಢೀರ್ ಕುಸಿದಿದ್ದು, ರಾಜ್ಯದ ಸಚಿವರು ಹಾಗೂ ಇತರರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಈ ವೇದಿಕೆಯನ್ನು ನದಿಯ ಪಕ್ಕದಲ್ಲೇ ಹಾಕಲಾಗಿದ್ದರಿಂದ ಸ್ವಲ್ಪ ಹೆಚ್ಚೂಕಡಿಮೆ ಆಗಿದ್ದರೂ ದುರಂತ ಸಂಭವಿಸಿರಬಹುದಾದ ಸಾಧ್ಯತೆ ಇತ್ತು.

    ಮಂಗಳೂರಿನ ಸಸಿಹಿತ್ಲು ಸಮೀಪದ ನಂದಿನಿ ನದಿ ಹತ್ತಿರ ಈ ಘಟನೆ ನಡೆದಿದೆ. ಇಂದು ಆರಂಭವಾಗಿರುವ ಎರಡು ದಿನಗಳ ನಂದಿನಿ ಉತ್ಸವದ ಉದ್ಘಾಟನೆಗೆ ಸಚಿವರು ಆಗಮಿಸಿದ್ದರು. ನಂದಿನಿ ನದಿ ಉತ್ಸವದ ಪ್ರಯುಕ್ತ ನಂದಿನಿಗೆ ಆರತಿ ಬೆಳಗಲು ನದಿ ಪಕ್ಕದಲ್ಲೇ ಸ್ಟೇಜ್ ಹಾಕಲಾಗಿತ್ತು.

    ಸಚಿವ ಸಿ.ಪಿ.ಯೋಗೀಶ್ವರ್​ ಉದ್ಘಾಟನೆಗೆ ಮುಂದಾದಾಗ ಅವರೊಂದಿಗೆ ಹೆಚ್ಚು ಜನರು ವೇದಿಕೆ ಮೇಲೆ ನಿಂತಿದ್ದರಿಂದ ಅದು ಕುಸಿದಿದೆ. ಸ್ಟೇಜ್ ನದಿ ಭಾಗಕ್ಕಿಂತ ಹಿಂಬದಿಗೆ ಮುರಿದು ಬಿದ್ದ ಪರಿಣಾಮ ಸಚಿವರು ಸೇರಿ ಇತರ ಗಣ್ಯರು ನದಿಗೆ ಬೀಳುವುದರಿಂದ ಪಾರಾಗಿದ್ದಾರೆ. ಈ ಸಂದರ್ಭ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು.

    ಸಚಿವರಿದ್ದ ಕಾರ್ಯಕ್ರಮದ ಸ್ಟೇಜ್ ಕುಸಿತ; ನದಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾದ್ರು ಸಚಿವರು ಮತ್ತಿತರರು..
    ವೇದಿಕೆ ಮೇಲಿದ್ದ ಸಚಿವ ಸಿ.ಪಿ.ಯೋಗೀಶ್ವರ್ ಮತ್ತಿತರರು

    ಕಂಬಳದಲ್ಲಿ ಮತ್ತೆ ಸಾಧನೆ ಮೆರೆದ ಮಿಜಾರು ಶ್ರೀನಿವಾಸ ಗೌಡ; 8.96 ಸೆಕೆಂಡ್​ಗಳಲ್ಲಿ 100 ಮೀಟರ್ ಓಟ!

    ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts