ಚೆನ್ನೈ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷ ನಿಷೇಧಕ್ಕೊಳಗಾಗಿರುವ ವೇಗಿ ಎಸ್. ಶ್ರೀಶಾಂತ್ ಇನ್ನೆರಡು ತಿಂಗಳಲ್ಲಿ ನಿಷೇಧದಿಂದ ಮುಕ್ತರಾಗಲಿದ್ದು, ಮರಳಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಪ್ರಕರಣದಲ್ಲಿ ಮೊದಲಿಗೆ ಶ್ರೀಶಾಂತ್ಗೆ ಆಜೀವ ನಿಷೇಧ ಹೇರಲಾಗಿತ್ತು. ಬಳಿಕ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳಿಗೆ ಇಳಿಸಿಕೊಂಡಿದ್ದರು. ಈ ನಿಷೇಧ ಮುಂದಿನ ಸೆಪ್ಟೆಂಬರ್ನಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡಲು ಬಯಸಿದ್ದಾರೆ.
‘ಅಭ್ಯಾಸ ಮುಂದುವರಿಸಿದ್ದೇನೆ. ಕೇರಳ ಕ್ರಿಕೆಟ್ ವಲಯ ನಾನು ವಾಪಸ್ ಬರುವುದನ್ನೇ ಕಾಯುತ್ತಿದೆ. ಸೆಪ್ಟೆಂಬರ್ನಲ್ಲಿ ಬಿಸಿಸಿಐನಿಂದ ಅಧಿಕೃತ ಆದೇಶ ಬರಲಿದೆ. 7 ವರ್ಷ ಕ್ರಿಕೆಟ್ ತಪ್ಪಿಸಿಕೊಂಡಿದ್ದೇನೆ. ಕ್ರಿಕೆಟ್ ನನ್ನನ್ನು ಸಾಕಷ್ಟು ಬದಲಾಯಿಸಿದೆ. ದೇಶ ಪ್ರತಿನಿಧಿಸಿದ್ದ ದಿನಗಳು ಸೇರಿದಂತೆ ಕ್ರಿಕೆಟ್ ಆಡಿದ ದಿನಗಳು ನನ್ನಲ್ಲಿ ಇನ್ನು ಹಚ್ಚ ಹಸಿರಾಗಿವೆ’ ಎಂದು 37 ವರ್ಷದ ಶ್ರೀಶಾಂತ್ ಹೇಳಿದ್ದಾರೆ.
ಫಿಟ್ನೆಸ್ ಸಾಬೀತು ಪಡಿಸಿದರೆ ಶ್ರೀಶಾಂತ್ಗೆ ಖಂಡಿತವಾಗಿಯೂ ಅವಕಾಶವಿದೆ ಎಂದು ಕೇರಳ ತಂಡದ ಕೋಚ್ ಟಿನು ಯೊಹಾನನ್ ತಿಳಿಸಿದ್ದಾರೆ.
ವಿಷ ಕನ್ಯೆ| ಆಕೆಯ ತುಟಿಗೆ ಕಿಸ್ ಕೊಟ್ಟ ವ್ಯಕ್ತಿಯ ಬದುಕೇ ಬದಲಾಗಿಬಿಟ್ಟಿತು!