ಶೃಂಗೇರಿ: ತಾಲೂಕಿನ ತನಿಕೋಡು ಚೆಕ್ಪೋಸ್ಟ್ ಬಳಿ ಹಾಗೂ ಆಗುಂಬೆ ರಸ್ತೆಯ ಕೈಮನೆ ಸಮೀಪ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ಗಳನ್ನು ಹಿಂದುಪರ ಸಂಘಟನೆ ಕಾರ್ಯಕರ್ತರು ಗುರುವಾರ ತಡರಾತ್ರಿ ತಡೆದು, ಇಬ್ಬರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೆರೆಕಟ್ಟೆ ಸಮೀಪ ವಶಪಡಿಸಿಕೊಂಡ ಕ್ಯಾಂಟರ್ನಲ್ಲಿದ್ದ ಇಬ್ಬರು ತಪ್ಪಿಸಿಕೊಂಡಿದ್ದಾರೆ. ಕೈಮನೆ ಸಮೀಪ ಬಂಧಿತನಾದ ಓರ್ವ ಪೊಲೀಸರ ವಶದಲ್ಲಿದ್ದು, ಮತ್ತೋರ್ವ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಗಳು ಎರಡು ಕ್ಯಾಂಟರ್ಗಳಲ್ಲಿ 34 ಎತ್ತು ಹಾಗೂ ಎಮ್ಮೆಗಳನ್ನು ಮಂಗಳೂರು ಕಡೆ ಆರೋಪಿಗಳು ಸಾಗಿಸುತ್ತಿದ್ದರು. ಕ್ಯಾಂಟರ್ ಸಾಗುವ ಮೊದಲು ಕೆರೆಕಟ್ಟೆ ಮಾರ್ಗವಾಗಿ ಒಂದು ಸ್ಕಾರ್ಪಿಯೋ ಹಾಗೂ ಇನ್ನೋವಾ ಕಾರುಗಳು ಸಾಗಿ ಹೋಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.