More

    ಹರಪನಹಳ್ಳಿಯಲ್ಲಿ ಸೀತಾರಾಮ ಕಲ್ಯಾಣೋತ್ಸವ

    ಹರಪನಹಳ್ಳಿ: ಶ್ರೀರಾಮ ನವಮಿ ಅಂಗವಾಗಿ ಪಟ್ಟಣದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ರಾಮಾಂಜನೇಯ ಸೇವಾ ಟ್ರಸ್ಟ್ ಹಾಗೂ ಸವಿತಾ ಸಮಾಜ ಸಂಘದಿಂದ ಗುರುವಾರ ರಾಮನವಮಿ ಉತ್ಸವ ಹಾಗೂ ಸೀತಾರಾಮ ಕಲ್ಯಾಣೋತ್ಸವ ಜರುಗಿತು.


    ಸುಪ್ರಭಾತ ಸೇವೆ ಮತ್ತು ಪಂಚಾಮೃತ ಅಭಿಷೇಕ, ರಾಮನಾಮ ಸಂಕೀರ್ತನೆ, ಪುಣ್ಯಾಹವಾಚನ ನಾಂದಿ, ಶ್ರೀರಾಮ ತಾರಕ ಹೋಮ ನಡೆಯಿತು. ರಾಮಾಂಜನೇಯ ವಿಗ್ರಹಕ್ಕೆ ಪೂಜೆ ಮಾಡಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಯುಗಾದಿ ಪಾಡ್ಯದಿಂದ ರಾಮನವಮಿವರೆಗೆ ಪಟ್ಟಣದ ವಿಜಯವಿಠ್ಠಲ ಹಾಗೂ ಪರಿಮಳ ಭಜನಾ ಮಂಡಳಿ, ಭೀಮೇಶಕೃಷ್ಣ ಭಜನಾ ಮಂಡಳಿಯವರಿಂದ ಪ್ರತಿದಿನ ಸಂಜೆ ರಾಮ ಭಜನಾ ಸೇವೆ ಜರುಗಿತು. ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.


    ಸವಿತಾ ಸಮಾಜದ ಗೌರವಾದ್ಯಕ್ಷ ವೆಂಕಟೇಶ ಮಾನಪಾಡ, ಅಧ್ಯಕ್ಷ ನರಸಿಂಹಲು, ಕಾರ್ಯದರ್ಶಿ ರಾಮಾಂಜನೇಯ, ಖಜಾಂಚಿ ಸಾಯಿಪ್ರಸಾದ್, ಎಂ.ಜಿ.ಆನಂದ, ಬಿ.ವೆಂಕಟೇಶ, ವೈ.ಸುನಿತ, ಭೀಮರಾಜ್, ಪದ್ಮನಾಭ, ವಿಜಯದಿವಾಕರ, ಎಂ.ಶಂಕರ, ಬಸವರಾಜ ಮತ್ತೂರು, ಪ್ರಸಾದ್ ಕಾವಡಿ ಇತರರಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಪಟ್ಟಾಭಿರಾಮಚಂದ್ರ ದೇವರ ಶೋಭಾಯಾತ್ರೆ ರದ್ದು ಪಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts