More

    ಶ್ರೀ ದುರ್ಗಾಂಬಾ ದೇವಿ ರಥೋತ್ಸವ ಸಂಪನ್ನ

    ಶೃಂಗೇರಿ: ಶ್ರೀ ದುರ್ಗಾಂಬಾ ದೇವಿಯ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

    ಬೆಳಗ್ಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಗಣಪತಿ ಪೂಜೆ, ಶ್ರೀ ದುರ್ಗಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಸುಡು ಬಿಸಿಲನ್ನು ಲೆಕ್ಕಿಸದೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಸಾಲಂಕೃತಗೊಂಡ ಶ್ರೀ ದುರ್ಗಾಂಬಾ ದೇವಿಗೆ ಶ್ರದ್ಧಾಭಕ್ತಿಯಿಂದ ಹಣ್ಣು, ಹೂವು ಅರ್ಪಿಸಿದರು. ಉಭಯ ಶ್ರೀಗಳು ಉತ್ಸವದಲ್ಲಿ ಭಾಗಿಯಾಗಿದ್ದರು.
    ವಾದ್ಯ ಘೋಷ್ಠಿಗಳು, ಶ್ರೀಮಠದ ಆನೆಗಳು, ಅಶ್ವಗಳು, ಚೆಂಡೆ ವಾದನ, ರಂಗವಲ್ಲಿ ಚಿತ್ತಾರ, ಛತ್ರಿ-ಚಾಮರ, ತಳಿರು-ತೋರಣ, ಬಣ್ಣಬಣ್ಣದ ಹೂಗಳಿಂದ ಸಾಲಂಕೃತಗೊಂಡ ದೇವಸ್ಥಾನ ಉತ್ಸವಕ್ಕೆ ವಿಶೇಷ ಮೆರಗನ್ನು ನೀಡಿದ್ದವು.
    ಉತ್ಸವದ ಸಲುವಾಗಿ ದೇವಾಲಯಕ್ಕೆ ಹಾಕಲಾದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಗಮನ ಸೆಳೆಯಿತು. ಸಾಲು-ಸಾಲಾಗಿ ಹಾಕಲಾದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ರಥೋತ್ಸವ ಸಲುವಾಗಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನೆರವೇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts