ದಾವಣಗೆರೆ : ಆನಗೋಡಿನಲ್ಲಿ ಮಂಗಳವಾರ ಸಂಜೆ ಜರುಗಿದ ಶ್ರೀ ಮರುಳಸಿದ್ದೇಶ್ವರ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ರಥದ ಬಾವುಟವನ್ನು ಕೊಗ್ಗನೂರು ಹೇಮಂತರಾಜ್ 2.60 ಲಕ್ಷ ರೂ.ಗಳಿಗೆ ಹರಾಜೂ ಕೂಗಿದರೆ, ರುದ್ರಾಕ್ಷಿ ಹಾರವನ್ನು 40 ಸಾವಿರ ರೂ.ಗಳಿಗೆ ರವಿಕುಮಾರ್ ಆನೆಕೊಂಡ, ಏಲಕ್ಕಿ ಹಾರವನ್ನು 30 ಸಾವಿರ ರೂ.ಗಳಿಗೆ ಭೀಮಸಮುದ್ರದ ಶಿವಸರ್ವೋತ್ತಮ ಅವರು, ತೆಂಗಿನಕಾಯಿಯನ್ನು ಪ್ರಕಾಶ ಅಣ್ಣಾಪುರ 75 ಸಾವಿರ ರೂ.ಗಳಿಗೆ ಹರಾಜಿನಲ್ಲಿ ಕೂಗಿಕೊಂಡರು. ತರಳಬಾಳು ಜ್ಯೂಯಲರ್ಸ್ ಬೋರಗೊಂಡನಹಳ್ಳಿ ಹಾಲೇಶಪ್ಪ ರಥಕ್ಕೆ ವಿಶೇಷ ಶೃಂಗಾರ ಮಾಡಿಸಿದ್ದರು.
ಫೋಟೋ: ಡಿವಿಜಿ ಆನಗೋಡು
ಆನಗೋಡಿನಲ್ಲಿ ಮಂಗಳವಾರ ಸಂಜೆ ಜರುಗಿದ ಶ್ರೀ ಮರುಳಸಿದ್ದೇಶ್ವರ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.