More

    ಅಭಿಮಾನಿಗಳು ಅಪ್ಪಲಿ ಎಂದೇ ಬಿಡುಗಡೆ ಆಗಲಿದೆ ಅಂದು ಅಪ್ಪು ಬೇಡ ಎಂದಿದ್ದ ಹಾಡು!

    ಬೆಂಗಳೂರು: ಮಾ. 17ರಂದು ಪವರ್​ ಸ್ಟಾರ್ ಪುನೀತ್ ರಾಜಕುಮಾರ್ ಜನ್ಮದಿನ. ಇದು ಅವರ ಅನುಪಸ್ಥಿತಿಯಲ್ಲಿ ನಡೆಯಲಿರುವ ಮೊದಲ ಜನ್ಮದಿನವಾದ್ದರಿಂದ ಅಭಿಮಾನಿಗಳು ತುಂಬಾ ವಿಶೇಷವಾಗಿ ಆಚರಿಸಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

    ಮತ್ತೊಂದೆಡೆ ಅವರ ಅಭಿನಯದ ಸಿನಿಮಾ ಕೂಡ ಅವರ ಅನುಪಸ್ಥಿತಿಯಲ್ಲಿ ಬಿಡುಗಡೆ ಆಗುತ್ತಿರುವುದರಿಂದ ‘ಜೇಮ್ಸ್’ ಚಿತ್ರದ ಬಿಡುಗಡೆಯನ್ನೂ ಒಂದು ಉತ್ಸವ ರೀತಿಯಲ್ಲಿ ನಡೆಸಲು ಕಾರ್ಯಕರ್ಮಗಳನ್ನು ಆಯೋಜಿಸಲಾಗಿದೆ. ಈ ಮಧ್ಯೆ ಅದಕ್ಕೂ ಮುನ್ನ ‘ಪವರಿಸಂ’ ಕೂಡ ಕಂಡುಬರಲಿದೆ. ಅರ್ಥಾತ್, ಪವರ್​ ಸ್ಟಾರ್ ಅಭಿಮಾನಿಗಳೆಲ್ಲ ಅಪ್ಪಲಿ ಎಂದೇ ಅಪ್ಪು ಅಂದು ಬೇಡ ಎಂದಿದ್ದ ಹಾಡೊಂದನ್ನು ಮಾ. 15ರಂದು ಬಿಡುಗಡೆ ಮಾಡಲಾಗುತ್ತಿದೆ.

    ರಾಕ್​ಲೈನ್ ವೆಂಕಟೇಶ್​ ನಿರ್ಮಾಣ, ಪವನ್ ವಡೆಯರ್ ನಿರ್ದೇಶನ ಹಾಗೂ ಪುನೀತ್​ ರಾಜಕುಮಾರ್, ಅನುಪಮಾ ಪರಮೇಶ್ವರನ್, ರಚಿತಾ ರಾಮ್​, ರವಿಶಂಕರ್, ಚಿಕ್ಕಣ್ಣ ಅವರ ತಾರಾಗಣದಲ್ಲಿ ಮೂಡಿಬಂದಿದ್ದ ‘ನಟ ಸಾರ್ವಭೌಮ’ ಚಿತ್ರದಲ್ಲಿನ ಈ ಹಾಡನ್ನು ಅಂದು ಅಪ್ಪು ಒಪ್ಪದ ಕಾರಣ ಬಿಡುಗಡೆ ಮಾಡಿರಲಿಲ್ಲ.

    ಪುನೀತ್ ಅಭಿನಯದ ಎಲ್ಲ ಚಿತ್ರಗಳ ಟೈಟಲ್​ಗಳನ್ನು ಸೇರಿಸಿಕೊಂಡು ನಿರ್ದೇಶಕ ಪವನ್ ವಡೆಯರ್ ಹಾಡೊಂದನ್ನು ಬರೆದಿದ್ದರು. ತುಂಬಾ ಚೆನ್ನಾಗಿಯೇ ಮೂಡಿಬಂದಿದ್ದ ಆ ಹಾಡಲ್ಲಿ ತಮ್ಮನ್ನು ವಿಶೇಷವಾಗಿ ತೋರಿಸಿದ್ದರಿಂದ ಮತ್ತು ಅದರಲ್ಲಿ ತಮ್ಮ ಬಗ್ಗೆಯೇ ಹೆಚ್ಚು ಅಂಶಗಳಿದ್ದರಿಂದ ತಮ್ಮನ್ನು ತಾವೇ ವಿಜೃಂಭಿಸಿಕೊಂಡಂತಾಗುತ್ತದೆ ಎಂದು ಅಪ್ಪು ಅಂದು ಆ ಹಾಡು ಬಿಡುಗಡೆ ಮಾಡಿಸಲು ಮುಜುಗರಪಟ್ಟಿದ್ದರು.

    ಆದರೆ ಅಪ್ಪು ಅವರ ಅಗಲಿಕೆ ಬಳಿಕ ಜನರಿಗೆ ಅವರ ಕುರಿತ ಪ್ರೀತಿ-ಅಭಿಮಾನ ಮತ್ತಷ್ಟು ಹೆಚ್ಚಾಗಿದ್ದು, ಮೊದಲನೆ ಪುಣ್ಯಸ್ಮರಣೆ ಸಂದರ್ಭದಲ್ಲಿ ಆ ಹಾಡನ್ನು ಬಿಡುಗಡೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ನಿರ್ದೇಶಕ ಪವನ್ ವಡೆಯರ್ ಮಾ. 15ರಂದು ಆ ಸಾಂಗ್ ರಿಲೀಸ್​ ಮಾಡಿಸಲು ಮುಂದಾಗಿದ್ದಾರೆ.

    ಈ ಕುರಿತು ಅವರು ಅಪ್ಪು ಆಪ್ತರ-ಅಭಿಮಾನಿಗಳ ಅಭಿಪ್ರಾಯಗಳನ್ನು ಪಡೆದೇ ಮುಂದಡಿ ಇಟ್ಟಿದ್ದಾರೆ. ಅಪ್ಪು ಮಾತ್ರವಲ್ಲ ಅವರ ಸಹೋದರರು ಕೂಡ ಡಾ.ರಾಜಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದು, ಅವರದೇ ಆದರ್ಶಗಳನ್ನು ಅನುಸರಿಸಿದ್ದಾರೆ. ಮಹಾತ್ಮನಂತಿದ್ದ ಅಪ್ಪು ಅವರು ಅಗಲಿಕೆ ಬಳಿಕ ಪರಮಾತ್ಮ ಎಂಬಂತಾಗಿದ್ದಾರೆ. ಇಂಥ ಸಂದರ್ಭದಲ್ಲಿ ಈ ಹಾಡು ಬಿಡುಗಡೆ ಸೂಕ್ತ ಎಂದು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಪವನ್​ ವಡೆಯರ್​ಗೆ ಸಲಹೆ ನೀಡಿದ್ದು, ನಾಡಿದ್ದು ಹಾಡು ಬಿಡುಗಡೆ ಆಗಲಿದೆ.

    ಅಭಿಮಾನಿಗಳು ಅಪ್ಪಲಿ ಎಂದೇ ಬಿಡುಗಡೆ ಆಗಲಿದೆ ಅಂದು ಅಪ್ಪು ಬೇಡ ಎಂದಿದ್ದ ಹಾಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts