ವಿಜಯಪುರ: ತಾಯಿಯ ಜತೆ ಜಗಳವಾಡಿ ಬಳಿಕ ಮನೆ ಬಿಟ್ಟು ಹೋಗಿದ್ದವ ನಾಲ್ಕು ದಿನಗಳ ಬಳಿಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವಿಜಯಪುರ ಜಿಲ್ಲೆಯ ಹಾಜಪ್ಪ ಮಲಕಪ್ಪ ಹುಬನೂರ(19) ಎಂಬಾತ ಸಾವಿಗೀಡಾದವ.
ಈ ನಾಲ್ಕು ದಿನಗಳ ಹಿಂದೆ ತಾಯಿಯೊಂದಿಗೆ ಮನೆಯಲ್ಲಿ ಜಗಳವಾಡಿಕೊಂಡಿದ್ದ. ಬಳಿಕ ಅದೇ ಸಿಟ್ಟಿನಲ್ಲಿ ಮನೆ ಬಿಟ್ಟು ಹೋಗಿದ್ದ. ಒಂದೆರಡು ದಿನಗಳು ಕಳೆದರೂ ಈತ ಮನೆಗೆ ಬಂದಿರಲಿಲ್ಲ. ಹೀಗಾಗಿ ಮನೆಯವರು ವಿಜಯಪುರದ ತಿಕೋಟಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಅತ್ತ ಪೊಲೀಸರು ಈತನ ಪತ್ತೆಗೆ ಕ್ರಮಕೈಗೊಂಡಿದ್ದ ಬೆನ್ನಲ್ಲೇ ಇಂದು ತಿಕೋಟಾ ಪಟ್ಟಣದ ತೆರೆದ ಬಾವಿಯೊಂದರಲ್ಲಿ ಶವ ಪತ್ತೆಯಾಗಿತ್ತು. ವಿಷಯ ತಿಳಿದ ಪೊಲೀಸರು ಅದನ್ನು ಮೇಲೆಕ್ಕೆತ್ತಿಸಿ ಪರಿಶೀಲಿಸಿದಾಗ ಕಾಣೆಯಾಗಿದ್ದ ಹಾಜಪ್ಪನ ಶವ ಎಂಬುದು ತಿಳಿದುಬಂದಿದೆ.
‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!