More

    ಲಯನ್ಸ್ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ

    ಸಿದ್ದಾಪುರ: ಲಯನ್ಸ್ ಸಂಸ್ಥೆಯು ಕಣ್ಣಿನ ತಪಾಸಣೆ, ವನಮಹೋತ್ಸವ, ಅಂಗಾಂಗ ದಾನ, ನೇತ್ರದಾನ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಲಯನ್ಸ್ ಸಂಸ್ಥೆ ನೂತನ ವಲಯ ಅಧ್ಯಕ್ಷ ಅಂಬೇಕಲ್ ನವೀನ್ ತಿಳಿಸಿದರು.

    ಇಲ್ಲಿನ ಲಯನ್ಸ್ ಕ್ಲಬ್ ಅಧ್ಯಕ್ಷೆ ನಮಿತಾ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಲಯನ್ಸ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್‌ನಲ್ಲಿ 36 ಸದಸ್ಯರಿದ್ದು, ಇನ್ನೂ ಹೆಚ್ಚಿನ ಸದಸ್ಯತ್ವ ನೀಡಬೇಕು. ಪಾಲಿಬೆಟ್ಟ ಚೆಶೈರ್ ಹೋಂ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯವನ್ನು ಒದಗಿಸಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಸಿದ್ದಾಪುರದ ಉರಗಪ್ರೇಮಿ ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ವಲಯ ರಾಯಭಾರಿ ಧನು ಉತ್ತಯ್ಯ, ಮೂರು ವಲಯಗಳ ಅಧ್ಯಕ್ಷ ವಿಶಾಲ್ ದೇವಯ್ಯ, ವಲಯ ಸಂಯೋಜಕಿ ಜ್ಯೋತಿ ಪೊನ್ನಪ್ಪ, ಲಯನ್ಸ್ ಕ್ಲಬ್ ಸಿದ್ದಾಪುರ ಕಾರ್ಯದರ್ಶಿ ಥಾಮಸ್ ಮ್ಯಾಥ್ಯೂ, ಖಜಾಂಚಿ ಸುಧಾ ಉತ್ತಪ್ಪ, ಪ್ರಿಯಾ ಅಂಬೇಕಲ್, ಬಾಲಕೃಷ್ಣ ಮತ್ತು ರೋಹಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts