ಹಾಸನ: ಯಂತ್ರದ ಬಿಡಿಬಾಗದೊಳಗೆ ಸಿಲುಕಿದ್ದ ಹಾವನ್ನು ರಕ್ಷಿಸಲು ಬಂದ ಉರಗ ರಕ್ಷಕ ಸ್ನೇಕ್ ಶೇಷಪ್ಪ ಅವರಿಗೆ ನಾಗರಹಾವು ಕಚ್ಚಿದ್ದು, ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಬುಧವಾರ ಮಧ್ಯಾಹ್ನ ಹಾಸನದ ಕೈಗಾರಿಕಾ ಕೇಂದ್ರದ ಕಾರ್ಖಾನೆಯೊಂದರ ಯಂತ್ರದ ಬಿಡಿಭಾಗದೊಳಗೆ ನಾಗರಹಾವು ಸೇರಿಕೊಂಡಿತ್ತು. ಕಾರ್ಖಾನೆಯವರ ಮನವಿ ಮೇರೆಗೆ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸ್ನೇಕ್ ಶೇಷಪ್ಪ ಬಂದಿದ್ದರು.
ಇದನ್ನೂ ಓದಿರಿ VIDEO: ‘ಕೆಂಪು ಹೂವು’ ಚೆಲುವೆಲ್ಲಾ ನಂದೆಂದಿತು… ‘ನೀಲಿ ಹಾವು’ ಅದರ ಸುತ್ತಿಕೊಂಡಿತು…!
ಯಂತ್ರದ ಬಿಡಿಭಾಗದಲ್ಲಿ ಹಾವಿನ ಹೊಟ್ಟೆ ಸಿಲುಕಿತ್ತು. ಅದನ್ನು ಹಿಡಿದ ಶೇಷಪ್ಪ, ಹಾವಿನ ದೇಹಕ್ಕೆ ಸುತ್ತಿಕೊಂಡಿದ್ದ ಕಬ್ಬಿಣವನ್ನು ಬಿಡಿಸುತ್ತಿದ್ದರು. ಈ ವೇಳೆ ಅವರ ಎಡಗೈ ಹೆಬ್ಬೆರಳಿಗೆ ಹಾವು ಕಚ್ಚಿದೆ. ತಮಗೆ ಹಾವು ಕಚ್ಚಿದರೂ ಧೃತಿಗೆಡ ಶೇಷಪ್ಪ, ಹಾವನ್ನು ರಕ್ಷಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು. ಈ ದೃಶ್ಯ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಈ ನಾಗರಹಾವು ಹೀಗಾ ಮಾಡೋದು?ಹಾಸನದ ಕೈಗಾರಿಕಾ ಕೇಂದ್ರದ ಕಾರ್ಖಾನೆಯೊಂದಕ್ಕೆ ನುಗ್ಗಿದ್ದ ನಾಗರಹಾವನ್ನು ಹಿಡಿದ ಸ್ನೇಕ್ ಶೇಷಪ್ಪ ಅವರು, ಯಂತ್ರದ ಬಿಡಿಭಾಗದೊಳಗೆ ಸಿಲುಕಿದ್ದ ಹಾವಿನ ದೇಹವನ್ನು ಬಿಡಿಸುತ್ತಿದ್ದರು. ಈ ವೇಳೆ ಸ್ನೇಕ್ ಶೇಷಪ್ಪರ ಎಡಗೈ ಹೆಬ್ಬೆರಳಿಗೆ ಕಚ್ಚಿದೆ. SnakeSeshappa-Hassan-Cobra
Posted by Vijayavani on Wednesday, September 23, 2020
VIDEO|ಶಿರಾ ಬೈ ಎಲೆಕ್ಷನ್: ಮತ ಕೇಳೋಕೆ ಬಂದ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ!