ಕೊಡಗು: ಎರಡು ತಲೆ ಹಾವನ್ನು ಅಕ್ರಮವಾಗಿ ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿದ್ದವನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಸಮೀಪದ ಆನಂದಪುರದಲ್ಲಿ ಹಾವು ಮಾರಾಟ ಮಾಡುವುದಕ್ಕೆ ಆತ ಪ್ರಯತ್ನಿಸಿದ್ದ.
ಬಂಧಿತನನ್ನು ಮೈಸೂರಿನ ಶಾಂತಿನಗರದ ಸೈಯದ್ ಮೊಮಿನ್(22) ಎಂದು ಗುರುತಿಸಲಾಗಿದೆ. ಕಡುನೀಲಿ ಮತ್ತು ಹಳದಿ ಬಣ್ಣದ ಏರ್ ಬ್ಯಾಗಿನಲ್ಲಿ ಹಾವನ್ನು ತುಂಬಿಕೊಂಡು ತಂದಿದ್ದ. ಆನಂದಪುರ ಬಸ್ ನಿಲ್ದಾಣದ ಸಮೀಪ ಈ ಬ್ಯಾಗನ್ನು ಹಿಡಿದುಕೊಂಡು ಗಿರಾಕಿಗಾಗಿ ಕಾಯುತ್ತಿದ್ದ. ಒಂದು ಕೋಟಿ ರೂಪಾಯಿ ಬೆಲೆಗೆ ಹಾವನ್ನು ಮಾರಾಟ ಮಾಡಲು ಮುಂದಾಗಿದ್ದ ಆತ.
ಇದನ್ನೂ ಓದಿ: ಕೆಂಪಿರುವೆ-ಚಿಟ್ಟೆಹುಳು ಸಹಬಾಳ್ವೆ!, ಉಡುಪಿಯಲ್ಲಿ ಪ್ರಕೃತಿ ವಿಸ್ಮಯ ಗುರುತಿಸಿದ ಚಿಟ್ಟೆ ಅಧ್ಯಯನಕಾರರು
ಹಾವು ಮಾರಾಟ ಮಾಡುವುದಕ್ಕೆ ಪ್ರಯತ್ನಿಸುತ್ತಿರುವ ಖಚಿತ ಮಾಹಿತಿ ಸಿಕ್ಕ ಕಾರಣ, ಅರಣ್ಯ ಸಂಚಾರಿ ದಳದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಸೈಯದ್ ಬಳಿ ತೆರಳಿ ಹಾವು ಬ್ಯಾಗ್ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ಆತನನ್ನು ಬಂಧಿಸಿದ್ದಾರೆ. ಅಲ್ಲದೆ, ಆತನ ಬಳಿ ಇದ್ದ ಹಾವನ್ನು ರಕ್ಷಿಸಲಾಗಿದೆ. (ದಿಗ್ವಿಜಯ ನ್ಯೂಸ್)
ಭೀಕರ ರಸ್ತೆ ಅಪಘಾತ: ಟ್ರ್ಯಾಕ್ಟರ್ ಮತ್ತು 108 ಆಂಬುಲೆನ್ಸ್ ಪರಸ್ಪರ ಡಿಕ್ಕಿ