ನವದೆಹಲಿ: ಕೇಂದ್ರ ಸಚವೆ ಸ್ಮೃತಿ ಇರಾನಿ ಇಂದು ಮಾಡಿದ ಟ್ವೀಟ್ ಒಂದು ದೇಶದ ಗಮನಸೆಳೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತವರಿನಂತಿದ್ದ ಅಮೇಠಿ ಕ್ಷೇತ್ರ ದಶಕಗಳ ಕಾಲ ಹಿಂದುಳಿದ ಬಗೆಯನ್ನು ಸ್ಮೃತಿ ಇರಾನಿಯವರ ಟ್ವೀಟ್ ಪರೋಕ್ಷವಾಗಿ ಬಿಂಬಿಸಿದೆ.
ಅವರ ಟ್ವೀಟ್ನಲ್ಲಿರುವ ಅಂಶಗಳಿಷ್ಟೆ- ಗೌರಿ ಗಂಜ್ ರೈಲ್ವೆ ನಿಲ್ದಾಣದ ಹಳೆಯ ಚಿತ್ರ ಮತ್ತು ಅಭಿವೃದ್ಧಿ ಹೊಂದಿದ ಈಗಿನ ಚಿತ್ರಗಳಿವೆ. ಜತೆಗೆ ಸಚಿವ ಸಂಪುಟ ಸಹೋದ್ಯೋಗಿ ಪಿಯೂಷ್ ಗೋಯೆಲ್ ಅವರಿಗೆ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಂಡದ್ದಕ್ಕಾಗಿ ಧನ್ಯವಾದವನ್ನು ಅವರು ಸಮರ್ಪಿಸಿದ್ದಾರೆ.
ಇದನ್ನೂ ಓದಿ: ಗ್ರಾಪಂ ಚುನಾವಣೆ ಅಕ್ಟೋಬರ್ನಲ್ಲಿ?
ರಾಹುಲ್ ಗಾಂಧಿ 1999ರಿಂದ 2019ರ ತನಕವೂ ಅಮೇಠಿಯ ಸಂಸದರಾಗಿದ್ದರು. ಅವರ ಪಕ್ಷದ ಸರ್ಕಾರವೇ 2014ರ ತನಕ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿತ್ತು. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರಾಹುಲ್ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧಿಸಿದ್ದರಾದರೂ ಸೋತಿದ್ದರು. ಆದರೂ ಪಟ್ಟು ಬಿಡದೆ 2019 ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದು ಈಗ ಇತಿಹಾಸ. ಸೋಲಿನ ಭೀತಿಯಿಂದ ರಾಹುಲ್ ಗಾಂಧಿ ಅಮೇಠಿಯ ಹೊರತಾಗಿ ಕೇರಳದ ವಯನಾಡ್ನಿಂದ ಸ್ಪರ್ಧಿಸಿದ್ದರು. ಅಲ್ಲಿ ಅವರು ಗೆಲುವು ದಾಖಲಿಸಿ ಸಂಸದರಾಗಿ ಮುಂದುವರಿದ್ದಾರೆ.
ಆದಾಗ್ಯೂ, ಅಮೇಠಿ ಜನರ ಕೈಬಿಟ್ಟಿಲ್ಲ ಎಂದು ಹೇಳುತ್ತಿರುವ ರಾಹುಲ್ ಗಾಂಧಿ, ಲಾಕ್ಡೌನ್ ಅವಧಿಯಲ್ಲಿ ಏಪ್ರಿಲ್ ತಿಂಗಳಲ್ಲಿ 12,000 ಸ್ಯಾನಿಟೈಸರ್ಗಳು, 20,000 ಫೇಸ್ಮಾಸ್ಕ್, 10,000 ಸೋಪುಗಳನ್ನು ವಿತರಿಸಿದ್ದಾಗಿ ವರದಿ ಇದೆ. (ಏಜೆನ್ಸೀಸ್)
वर्षों से जर्जर स्थिति और नागरिक सुविधाओं के अभाव में जूझ रहे अमेठी के गौरीगंज स्टेशन का कायाकल्प करने हेतु रेल मंत्री @PiyushGoyal जी का हार्दिक धन्यवाद।
स्टेशन पर यात्रियों के लिए Wi-Fi, कोच जानकारी प्रणाली जैसी सुविधाओं के सफल कार्यान्वयन हेतु @drmlko25 जी के प्रति भी आभार। pic.twitter.com/ewzUPooRWz
— Smriti Z Irani (@smritiirani) July 9, 2020