ಭುವನೇಶ್ವರ: ಶಾಲೆಗೆ, ಕಾಲೇಜಿಗೆ, ಆಫೀಸಿಗೆ ಲೇಟಾಗಿ ಹೋದರೆ ಸುಲಭವಾಗಿ ಹೇಳಲು ಸಿಗುವ ಕಾರಣ ಬಸ್ಸು ಲೇಟು ಎನ್ನೋದು. ಆದರೆ ನಿಜವಾಗಿಯೂ ಬಸ್ಸಿನ ತೊಂದರೆಯಿಂದ ಶಾಲೆಗೆ ಲೇಟಾಗಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬ ಮಾಡಿದ ದೂರಿನಿಂದ ಬಸ್ಸಿನ ಸಮಯವೇ ಬದಲಾಗಿದ್ದು, ಪ್ರಶಂಸೆಯ ಸುರಿಮಳೆ ಕೇಳಿಬಂದಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಪ್ರೈವೇಟ್ ಗ್ರೂಪ್ ಸೇರೋಕೆ ಗೂಗಲ್ನಲ್ಲೇ ಲಿಂಕ್! ತಪ್ಪು ಮಾಡಿ ತಿದ್ದಿಕೊಂಡ ವಾಟ್ಸ್ಆ್ಯಪ್
ಒಡಿಸ್ಸಾದ ಭುವನೇಶ್ವರದ ಎಂಬಿಎಸ್ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಪ್ರತಿದಿನ ಶಾಲೆಗೆ 7.30ಕ್ಕೆ ಹೋಗಬೇಕಿತ್ತಂತೆ. ಪ್ರತಿದಿನ ಅಲ್ಲಿನ ಸ್ಥಳೀಯ ಸಾರಿಗೆ ಬಸ್ಸಿನಲ್ಲೇ ಆತ ಶಾಲೆಗೆ ಹೋಗುತ್ತಿದ್ದ. ಆದರೆ ಅಲ್ಲಿನ ಮೊದಲ ಬಸ್ಸಿದ್ದಿದ್ದು 7.40ಕ್ಕೆ ಇದರಿಂದಾಗಿ ಪ್ರತಿದಿನ ಶಾಲೆಗೆ ತಡವಾಗಿ ಹೋಗಬೇಕಾಗಿತ್ತಂತೆ. ಈ ವಿಚಾರವಾಗಿ ಬಾಲಕ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾನೆ. ಇದರ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳಿ ಎಂದು ಕೇಳಿಕೊಂಡಿದ್ದಾನೆ. ತನ್ನ ಟ್ವೀಟ್ನಲ್ಲಿ ಕ್ಯಾಪಿಟಲ್ ರೀಜನ್ ಅರ್ಬನ್ ಟ್ರಾನ್ಸ್ಪೋರ್ಟ್ (ಸಿಆರ್ಯುಟಿ) ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಅವರನ್ನು ಟ್ಯಾಗ್ ಮಾಡಿದ್ದಾನೆ.
ಬಾಲಕ ಜನವರಿ 8ರಂದು ಈ ದೂರಿನ ಟ್ವೀಟ್ ಮಾಡಿದ್ದು, ಜನವರಿ 9ಕ್ಕೆ ಅರುಣ್ ಬೋತ್ರಾ ಅದಕ್ಕೆ ಸ್ಪಂದಿಸಿದ್ದಾರೆ. ಸೋಮವಾರದಿಂದ ಬಸ್ಸಿನ ಸಮಯ ಬದಲಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿದಿನ ಬೆಳಗ್ಗೆ 7 ಗಂಟೆಗೇ ಮೊದಲ ಬಸ್ಸು ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ನಮ್ಮದು ಸಂಘ ಪರಿವಾರಕ್ಕೆ ಸೇರಿದ ಕುಟುಂಬ; ನಾವೂ ಹಾಫ್ ಚಡ್ಡಿ ಹಾಕಿದವರೇ ಎಂದ ರಮೇಶ್ ಜಾರಕಿಹೊಳಿ
ಶಾಲಾ ವಿದ್ಯಾರ್ಥಿಯು ಟ್ವಿಟ್ಟರ್ನಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ಮಗರ ಸಾರಿಗೆಯ ಬಗ್ಗೆ ಇದೀಗ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ತಕ್ಷಣ ಕ್ರಮ ತೆಗೆದುಕೊಂಡ ಅರುಣ್ ಬೋತ್ರಾ ಅವರಿಗೆ ಜನರು ಪ್ರಶಂಶಿಸಲಾರಂಭಿಸಿದ್ದಾರೆ. (ಏಜೆನ್ಸೀಸ್)
Dear Sai#MoBus moves with love of commuters like you. The timing of your bus will be changed from Monday. The first bus will start at 7 AM. You won't be late for school.
With affection from entire team of @CRUT_BBSR. https://t.co/kimd85bXIg
— Arun Bothra (@arunbothra) January 9, 2021
ಎಂಗೇಜ್ಮೆಂಟ್ ಆದ್ಮೇಲೆ ಸೆಕ್ಸ್ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ
ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!