More

    ಜೀವ ತೆಗೆಯುತ್ತಿರುವ ವರುಣ…; ಗೋಡೆ ಕುಸಿದು ಆರು ಮಂದಿ ಬಲಿ

    ಮಳೆಯ ಆರ್ಭಟ ದೇಶದ ಎಲ್ಲೆಡೆ ಹೆಚ್ಚಾಗಿದೆ. ನಿನ್ನೆ ರಾತ್ರಿ ಹೈದರಾಬಾದ್​ನಲ್ಲಿ ಮನೆಗಳ ಮೇಲೆ ಕಾಂಪೌಂಡ್ ಗೋಡೆ ಕುಸಿದು ಸುಮಾರು 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

    ಹಾಗೇ ಇಂದು ಮಹಾರಾಷ್ಟ್ರದ ಸೋಲಾಪುರದ ಪಂಡರಾಪುರದಲ್ಲಿರುವ ಚಂದ್ರಭಾಗಾ ನದಿ ದಡದ ಮೇಲೆ ಇದ್ದ ಮನೆಗಳ ಕಾಂಪೌಂಡ್ ಗೋಡೆ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ.

    ಇಂದು ಮಧ್ಯಾಹ್ಯ 2.30ರ ಹೊತ್ತಿಗೆ ಘಟನೆ ನಡೆದಿದೆ. ಕಾಂಪೌಂಡ್ ಗೋಡೆ ಕುಸಿದು ಮನೆಗಳ ಮೇಲೆ ಬಿದ್ದು ಒಂದೇ ಕುಟುಂಬದ ನಾಲ್ಕು ಮಂದಿ ಸೇರಿ ಒಟ್ಟು 6 ಜನರ ಜೀವ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಡೆಗಳ ಅವಶೇಷದಡಿ ಸಿಲುಕಿದ್ದ ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಸ್ಥಳದಲ್ಲಿ ವಿಪತ್ತು ನಿರ್ವಹಣಾ ತಂಡದವರೂ ಬೀಡುಬಿಟ್ಟಿದ್ದಾರೆ. (ಏಜೆನ್ಸೀಸ್​)

    ಅಬ್ಬರಿಸುತ್ತಿರುವ ವರುಣ: ಕುಸಿದ ಕಾಂಪೌಂಡ್​ – ಮಗು ಸೇರಿ 9 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts