ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟ, ನಟಿಯರ ಸಂಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗ 5 ಕೋಟಿ ರೂಪಾಯಿಂದ 100 ಕೋಟಿ ರೂ. ತೆಗೆದುಕೊಳ್ಳುವ ಸ್ಟಾರ್ ಹೀರೋಗಳಿದ್ದಾರೆ. ಇವರೆಲ್ಲರಿಗೂ ಚಿತ್ರ ಓಕೆ ಆಗಿದ್ದರೆ ಕೋಟಿಗಟ್ಟಲೆ ಅಡ್ವಾನ್ಸ್ ಕೊಡಬೇಕು. ಆದರೆ ಇಲ್ಲೊಬ್ಬ ನಟ ಮಾತ್ರ ಕೇವಲ ಒಂದು ಸಾವಿರ ರೂ. ಮಾತ್ರ ಪಡೆದಿದ್ದು ಸಖತ್ ಸುದ್ದಿಯಲ್ಲಿದೆ.
ಈ ಹಿಂದೆ ಸಾಕಷ್ಟು ಸ್ಟಾರ್ ಹೀರೋಗಳಾದ ಎನ್ಟಿಆರ್, ಎಎನ್ಎನ್ಆರ್, ಚಿರಂಜೀವಿ ಮುಂಗಡ, ಸಂಭಾವನೆ ತೆಗೆದುಕೊಳ್ಳದೇ ಸಿನಿಮಾ ಮಾಡಿ ನಷ್ಟದಲ್ಲಿದ್ದ ನಿರ್ಮಾಪಕರಿಗೆ ಆಸರೆಯಾದ ದಿನಗಳೂ ಇದ್ದವು. ಸಿನಿಮಾ ಮುಗಿದ ನಂತರವೇ ಹಣ ತೆಗೆದುಕೊಳ್ಳುತ್ತಾರೆ. ಲಾಭವಿಲ್ಲದಿದ್ದರೆ ತೊಂದರೆ ಇಲ್ಲ ಎಂದು ಇನ್ನೊಂದು ಸಿನಿಮಾಗೆ ಡೇಟ್ಸ್ ಕೊಡುತ್ತಾರೆ.
ಇದನ್ನೂ ಓದಿ: ಅಂದಿದ್ದ 22 ಇಂಚಿನ ಸೊಂಟ ಈಗಿಲ್ಲ…ಹಳೆಯ ಫೋಟೋ ಸಮೇತ ಇಂಟರೆಸ್ಟಿಂಗ್ ಪೋಸ್ಟ್ ಹಾಕಿದ ನಟಿ!
ತಮಿಳಿನ ಸ್ಟಾರ್ ಹೀರೋ ಶಿವ ಕಾರ್ತಿಕೇಯನ್ ಇತ್ತೀಚೆಗೆ ಬಹುಬೇಡಿಕೆಯ ನಟರ ಸಾಲೀನಲ್ಲಿದ್ದಾರೆ. ತಮಿಳಿನ ಜತೆಗೆ ಶಿವ ಕಾರ್ತಿಕೇಯನ್ ತೆಲುಗಿನಲ್ಲೂ ಉತ್ತಮ ಅಭಿಮಾನಿ ಬಳಗ ಮತ್ತು ಆಫರ್ ಹೊಂದಿದ್ದಾರೆ. ಇತ್ತೀಚೆಗೆ ಅವರ ಚಿತ್ರಗಳು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿವೆ. ಶಿವಕಾರ್ತಿಕೇಯನ್ ಮತ್ತು ಅದಿತಿ ಶಂಕರ್ ಅಭಿನಯದ ಮಹಾವೀರುಡು ಜುಲೈ 14 ರಂದು ಬಿಡುಗಡೆಯಾಗಲಿದೆ. ಇದರೊಂದಿಗೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.
ಇದನ್ನೂ ಓದಿ: ಟಿಪ್ಪುನಗರದಲ್ಲಿ ಹೆಚ್ಚುವರಿ ವಿದ್ಯುತ್ ಬಿಲ್ ಬಂದದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ!
ಈ ಪ್ರಚಾರಗಳ ಭಾಗವಾಗಿ ಆಯೋಜಿಸಲಾದ ತಮಿಳು ಪ್ರೀ ರಿಲೀಸ್ ಸಮಾರಂಭದಲ್ಲಿ, ಕಾರ್ತಿಕೇಯನ್ ಬಗ್ಗೆ ಮಾತನಾಡುವಾಗ ನಿರ್ಮಾಪಕ ಶಿವ ಭಾವುಕರಾದರು. ನಿರ್ಮಾಪಕ ಅರುಣ್ ವಿಶ್ವ ಹೇಳಿದರು.. ಹೀರೋ ಶಿವ ಕಾರ್ತಿಕೇಯನ್ ನಮಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ನನ್ನ ತಾಯಿ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿದ್ದಾಗ ಶಿವ ಕಾರ್ತಿಕೇಯನ್ ಸಾಕಷ್ಟು ಸಹಾಯ ಮಾಡಿದರು. ಆಗ ನಮಗೂ ಸಿನಿಮಾ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಕೇವಲ 1000 ರೂಪಾಯಿ ಮುಂಗಡ ಪಡೆದು ಶಿವಕಾರ್ತಿಕೇಯನ್ ಈ ಸಿನಿಮಾ ಮಾಡಿದ್ದಾರೆ. ಅವರು ನಮಗೆ ತುಂಬಾ ಸಹಾಯ ಮಾಡಿದರು. ಸಾಲ ತೀರಿಸಲಾಗದು ಎಂದು ಭಾವುಕರಾದರು. ಇದರೊಂದಿಗೆ ಅಭಿಮಾನಿಗಳು ಹಾಗೂ ನೆಟಿಜನ್ಗಳು ಶಿವಕಾರ್ತಿಕೇಯನ್ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮಾದರಿ ಮಹಿಳೆ; ವೈದ್ಯ ವೃತ್ತಿ ಬಿಟ್ಟು ವ್ಯಾಪಾರಕ್ಕೆ ಕಾಲಿಟ್ಟ ಡೈನಾಮಿಕ್ ಲೇಡಿ