ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣದ ಎಸ್ಐಟಿ ಮುಖ್ಯಸ್ಥ ಮತ್ತು ಬೆಂಗಳೂರು ನಗರ (ಪಶ್ಚಿಮ) ಹೆಚ್ಚುವರಿ ಆಯುಕ್ತ ಸೌಮೆಂದು ಮುಖರ್ಜಿ ಮತ್ತೆ ಒಂದು ತಿಂಗಳು ರಜೆ ಪಡೆದಿದ್ದಾರೆ.
ಆರೋಗ್ಯ ಕಾರಣಕ್ಕೆ 20 ದಿನಗಳಿಂದ ರಜೆಯಲ್ಲಿದ್ದ ಸೌಮೆಂದು ಮುಖರ್ಜಿ, ಮತ್ತೆ ರಜೆಯನ್ನು ವಿಸ್ತರಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮಾಜಿ ಸಚಿವರ ಲೈಂಗಿಕ ಹಗರಣ ಪ್ರಕರಣದ ತನಿಖೆಯಲ್ಲಿ ಕೆಲವರ ಹಸ್ತಕ್ಷೇಪದಿಂದ ಬೇಸರಗೊಂಡು ದೂರ ಸರಿದಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಎಸ್ಐಟಿ ಮುಖ್ಯಸ್ಥರ ರಜೆ ಅವಧಿಯಲ್ಲಿ ಪ್ರಮುಖ ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ವಿಚಾರಣೆ ನಡೆದಿತ್ತು. ಆದರೆ, ತನಿಖೆಗೂ, ರಜೆಗೂ ಸಂಬಂಧ ಇಲ್ಲವೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!
ಕೆಥೊಲಿಕ್ ಪಾದ್ರಿಗಳ ಸೆಕ್ಸ್ ಸ್ಕ್ಯಾಂಡಲ್: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!
ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್ ಮಾಹಿತಿ ಇಲ್ಲಿದೆ…
ಮುಸ್ಲಿಮರಲ್ಲಿನ ಬಡತನ-ಅನಕ್ಷರತೆ ಹೋಗಲಾಡಿಸಲು ‘ಅದನ್ನು ಪಾಲಿಸಿ’ ಎಂದರು ಅಸ್ಸಾಂ ಸಿಎಂ