ಸಿರಿಗೇರಿ: ಶಿಕ್ಷಕರ ದಿನಾಚರಣೆ ನಿಮಿತ್ತ ವಿವಿಧ ಸಂಘಟನೆಗಳಿಂದ ಆಯೋಜನೆಗೊಂಡ ಸಿರಿಗೇರಿ ಮತ್ತು ಎಂ.ಸೂಗುರು ಕ್ಲಸ್ಟರ್ ಮಟ್ಟದ ಶಿಕ್ಷಕರಿಗೆ ಚುಟುಕು ಕ್ರಿಕೆಟ್
ಪಂದ್ಯಾವಳಿಯನ್ನು ಪಿಎಸ್ಐ ಎಚ್.ಸದ್ದಾಂ ಹುಸೇನ್ ಟಾಸ್ ಹಾಕಿ ಚಾಲನೆ ನೀಡಿದರು.
ಇದನ್ನೂ ಓದಿ: 18 ಮಂದಿಗೆ ದಾವಣಗೆರೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಟಾಸ್ ಗೆದ್ದ ಎಂ.ಸೂಗುರು ಶಿಕ್ಷಕರ ತಂಡ, ಬ್ಯಾಟಿಂಗ್ನ್ನು ಆಯ್ಕೆ ಮಾಡಿ. ನಿಗದಿತ 10 ಓವರ್ಗಳಲ್ಲಿ 133 ರನ್ಗಳನ್ನು ಗಳಿಸಿ 3 ವಿಕೆಟ್ ಕಳೆದುಕೊಂಡಿತು. ತಂಡದ ಪರ ತಿಪ್ಪೇಸ್ವಾಮಿ ಶತಕ ಬಾರಿಸಿ ಪಂದ್ಯ ಶ್ರೇಷ್ಠರಾದರು.
ನಂತರ ಈ ಮೊತ್ತವನ್ನು ಕಲೆ ಹಾಕುವಲ್ಲಿ ಸಿರಿಗೇರಿ ವಲಯದ ಶಿಕ್ಷಕರ ತಂಡ ವಿಫಲವಾಯಿತು. ಕೇವಲ 89 ರನ್ 4 ವಿಕೆಟ್ ಕಳೆದುಕೊಂಡು ಸೋಲನ್ನೊಪ್ಪಿಕೊಂಡಿತು. ಅತ್ಯುತ್ತಮ ಬ್ಯಾಟಿಂಗ್ ಕೊಳ್ಳಿ ನಾಗರಾಜ್,ಅತ್ಯುತ್ತಮ ಬೌಲರ್ ಚಿದಾನಂದಪ್ಪ ಪ್ರಶಸ್ತಿ ಪಡೆದರು.
ಕಾರ್ಯಕ್ರಮದ ಆಯೋಜಕರಾದ ವಕೀಲ ರಾಮ್ಬಾಬು, ಬಿಆರ್ಸಿ ಕೋ ಅರ್ಡಿನೇಟರ್ ಎಸ್.ಯೋಗನಂದಯ್ಯ,ಇಸಿಒ ಎಚ್.ಪಂಪಾಪತಿ, ವಿ.ಹನುಮೇಶ್, ವೀರೇಶ್, ಹಳ್ಳಿಮರದ ನಾಗರಾಜ್, ಶಿವಾಜಿ ರಾವ್ ಭಾಗವಹಿಸಿದ್ದರು.