More

    ಕನ್ನಡ ನಾಡು ಕಂಡ ಶ್ರೇಷ್ಠ ಕವಿ

    ಸಿರಿಗೆರೆ: ಜನಸಾಮಾನ್ಯರು ಮತ್ತು ವಿದ್ವಾಂಸರೆಲ್ಲರ ಮನಸ್ಸನ್ನು ಗೆದ್ದಿದ್ದ ಕವಿ ಕೆ.ಎಸ್.ನಿಸಾರ್ ಅಹಮದ್ ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ಬೃಹನ್ಮಠದೊಡನೆ ಅವರ ಸಂಪರ್ಕ ಅತ್ಯಂತ ನಿಕಟವಾಗಿತ್ತು. 1979ರಲ್ಲಿ ನಡೆದ ನಮ್ಮ ಪಟ್ಟಾಭೀಷೇಕದಿಂದ ಮೊದಲುಗೊಂಡು ತರಳಬಾಳು ಹುಣ್ಣಿಮೆ ಹಾಗೂ ಬೆಂಗಳೂರು ತರಳಬಾಳು ಕೇಂದ್ರದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು.

    1991ರಲ್ಲಿ ಬೃಹನ್ಮಠವು ಅವರ ಸಮಗ್ರ ಕವಿತೆಗಳ ಸಂಕಲನ ಪ್ರಕಟಿಸಲು ಅವಕಾಶ ಮಾಡಿಕೊಟ್ಟಿತ್ತು ಎಂಬ ಹಳೆಯ ನೆನಪನ್ನು ಸ್ಮರಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts