More

    ‘ಸಿರಿ ಲಂಬೋದರ ವಿವಾಹ’ಕ್ಕೆ ರಮೇಶ್ ಅರವಿಂದ್ ಸಾಥ್​; ದುಬೈನಲ್ಲಿ ಚಿತ್ರದ ಪ್ರೀಮಿಯರ್​

    ಬೆಂಗಳೂರು: ಒಂದು ವರ್ಷದ ಹಿಂದೆಯೇ ಆರಂಭವಾಗಿತ್ತು ಸೌರಭ್ ಕುಲಕರ್ಣಿ ನಿರ್ದೇಶನದ ‘ಸಿರಿ ಲಂಬೋದರ ವಿವಾಹ’ (ಎಸ್ ಎಲ್ ವಿ) ಎಂಬ ಹೊಸ ಚಿತ್ರ. ಈಗ ಈ ಚಿತ್ರ ಮುಗಿದಿದ್ದು, ಇತ್ತೀಚೆಗೆ ಎ2 ಮ್ಯೂಸಿಕ್​ ಚಾನಲ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ. ರಮೇಶ್ ಅರವಿಂದ್ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ಇದನ್ನೂ ಓದಿ: ಕೊರಗಜ್ಜನ ಜೀವನ ಆಧರಿಸಿ ಸುಧೀರ್​ ಅತ್ತಾವರ್​ ಹೊಸ ಚಿತ್ರ …

    'ಸಿರಿ ಲಂಬೋದರ ವಿವಾಹ'ಕ್ಕೆ ರಮೇಶ್ ಅರವಿಂದ್ ಸಾಥ್​; ದುಬೈನಲ್ಲಿ ಚಿತ್ರದ ಪ್ರೀಮಿಯರ್​

    ಹೊಸ ‘ಪಾಪ ಪಾಂಡು’ ಧಾರಾವಾಹಿಯಲ್ಲಿ ಪುಂಡನ ಪಾತ್ರ ನಿರ್ವಹಿಸಿದ್ದ ಅಂಜನ್​ ಭಾರದ್ವಾಜ್​ ಈ ಚಿತ್ರದ ಮೂಲಕ ನಾಯಕನಾದರೆ, ಮಂಡ್ಯ ರಮೇಶ್​ ಮಗಳು ದಿಶಾ ರಮೇಶ್​ ನಾಯಕಿಯಾಗಿ ನಟಿಸಿದ್ದಾರೆ. ಇದು ಈಕೆಯ ಎರಡನೇ ಚಿತ್ರ. ಈ ಹಿಂದೆ ದಿಶಾ, ಬಿ. ಸುರೇಶ ನಿರ್ದೇಶನದ ‘ದೇವರ ನಾಡಲ್ಲಿ’ ಚಿತ್ರದಲ್ಲಿ ನಟಿಸಿದ್ದರು.

    ‘ಸಿರಿ ಲಂಬೋದರ ವಿವಾಹ’ದ ಕುರಿತು ಮಾತನಾಡುವ ನಿರ್ದೇಶಕ ಸೌರಭ್​ ಕುಲಕರ್ಣಿ, ‘ಮನರಂಜನೆಯ ಜತೆಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ಸಿರಿ ಹಾಗೂ ಲಂಬೋದರ ಈ ಚಿತ್ರದ ನಾಯಕ-ನಾಯಕಿ ಅಲ್ಲ. ಹಾಗಾದರೆ, ‘ಸಿರಿ ಹಾಗೂ ಲಂಬೋದರ’ ಎಂಬ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಇದೆ. ರಂಗಭೂಮಿ ಕಲಾವಿದರೇ ಹೆಚ್ಚಾಗಿ ಈತನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ. ಮತ್ತೊಂದು ಖುಷಿಯ ವಿಚಾರವೆಂದರೆ, ಡಿಸೆಂಬರ್​ನಲ್ಲಿ ಓಮನ್ ಹಾಗೂ ದುಬೈ ದೇಶಗಳಲ್ಲಿ ನಮ್ಮ ಚಿತ್ರದ ಪ್ರೀಮಿಯರ್ ನಡೆಯಲಿದೆ. ನಾನು ಸೇರಿದಂತೆ ಅನೇಕ ಸಿನಿಮಾಸಕ್ತರು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ’ ಎನ್ನುತ್ತಾರೆ.

    ಈ ಚಿತ್ರದಲ್ಲಿ ಅಂಜನ್​, ವೆಡ್ಡಿಂಗ್​ ಪ್ಲಾನರ್​ ಆಗಿ ಕಾಣಿಸಿಕೊಂಡಿದ್ದಾರಂತೆ. ಇನ್ನು, ದಿಶಾ ಚಿತ್ರದಲ್ಲಿ ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ನಟಿಸುವುದಕ್ಕೆ ಒಪ್ಪಿಕೊಂಡರಂತೆ. ಅವರಿಬ್ಬರ ಜತೆಗೆ ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ.ಸತೀಶ್ ಚಂದ್ರ, ‘ಮಜಾಭಾರತ’ದ ಶಿವು ಹಾಗೂ ಸುಶ್ಮಿತಾ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸದಾನಂದ ಕಾಳೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    ಇದನ್ನೂ ಓದಿ: ಕರುಳುಬಳ್ಳಿಯ ಕಥೆ ಹೇಳಲಿದೆ ‘2nd ಲೈಫ್’; ಟ್ರೈಲರ್​ ಬಿಡುಗಡೆ

    ‘ಸಿರಿ ಲಂಬೋದರ ವಿವಾಹ’ ಚಿತ್ರಕ್ಕೆ ಕಿಟ್ಟಿ ಕೌಶಿಕ್ ಛಾಯಾಗ್ರಹಣ , ಸಂಘರ್ಷ್​​ ಕುಮಾರ್​ ಸಂಗೀತವಿದೆ. ವರ್ಸಾಟೋ ವೆಂಚರ್ಸ್​, ಪವಮಾನ ಕ್ರಿಯೇಷನ್ಸ್​ ಮುಂತಾದ ಸಂಸ್ಥೆಗಳು ಈ ಚಿತ್ರವನ್ನು ನಿರ್ಮಿಸುತ್ತಿವೆ.

    ಧ್ರುವ ಸರ್ಜಾ ಹೊಸ ಚಿತ್ರಕ್ಕೆ ಮಾಲಾಶ್ರೀ ಮಗಳು ರಾಧಾನಾ ನಾಯಕಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts