More

    3 ಗಂಟೆ ಕೆಟ್ಟು ನಿಂತ ಸಿಂಗದೂರು ಲಾಂಚ್

    ಬ್ಯಾಕೋಡು: ಶರಾವತಿ ಹಿನ್ನೀರಿನ ಹೊಳೆಬಾಗಿಲು ಲಾಂಚ್ ಸೋಮವಾರ ಕೆಲ ಕಾಲ ಸ್ಥಗಿತಗೊಂಡ ಪರಿಣಾಮ ಸ್ಥಳೀಯರು ಸೇರಿದಂತೆ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದರು. ಸ್ಥಳಕ್ಕೆ ಬಂದ ಕಡವು ನಿರೀಕ್ಷಕ ಧನೇಂದ್ರ ಕುಮಾರ್ ಪರಿಸ್ಥಿತಿ ಅವಲೋಕಿಸಿದರು. ಅಂದಾಜು 3 ಗಂಟೆಗಳ ಬಳಿಕ ಲಾಂಚ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಸೋಮವಾರ ಹೊಳೆಬಾಗಿಲಿನಲ್ಲಿ ಎರಡೂ ಲಾಂಚ್‌ಗಳು ಕೆಟ್ಟು ಹೋಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕರೂರು ಭಾರಂಗಿ ಹೋಬಳಿಯ ಜನರು ದಿನನಿತ್ಯ ಅಗತ್ಯ ಸೌಲಭ್ಯಕ್ಕಾಗಿ ಸಾಗರಕ್ಕೆ ಹೋಗಲು ಇದೇ ಮಾರ್ಗ ಅವಲಂಬಿಸಿದ್ದಾರೆ. ಅಲ್ಲದೆ ದ್ವೀಪದ ಹಲವೆಡೆ ವಿಪರೀತ ಮಳೆ ಆಗುತ್ತಿದ್ದು ಲಾಂಚ್ ಸ್ಥಗಿತಗೊಂಡರೆ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಆತಂಕ ಕಾಡುತ್ತಿದೆ. ಕೂಡಲೆ ಅಗತ್ಯ ತಾಂತ್ರಿಕ ದೋಷ ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
    ದಿನನಿತ್ಯ ಸಾವಿರಾರು ಮಂದಿ ಭಕ್ತರು, ಸ್ಥಳೀಯರು ಓಡಾಡುವ ಲಾಂಚ್ ಸುರಕ್ಷತೆಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts