ಮೈಸೂರು: ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಯಾವತ್ತು ಎನ್ನುವ ಕುತೂಹಲ ರಾಜಕೀಯ ಆಸಕ್ತರಿಗೆ ಇರುವಂಥದ್ದೇ. ಆದರೆ ಆ ಬಗ್ಗೆ ಇನ್ನೂ ಯಾವುದೇ ಖಚಿತ ನಿರ್ಧಾರ ಆಗಿರದಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ, ಆ ಕುರಿತ ಭವಿಷ್ಯವನ್ನು ನುಡಿದಿದ್ದಾರೆ.
ಮೈಸೂರಿನ ಸಮಾರಂಭದಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನವೆಂಬರ್ನಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ ಆಡಳಿತಾರೂಢ ಬಿಜೆಪಿಯವರಿಗೆ ಚುನಾವಣೆ ನಡೆಸುವ ಆಸಕ್ತಿ ಇಲ್ಲ. ಅವರು ಕ್ಷೇತ್ರ ಪುನರ್ ವಿಂಗಡಣೆಗೆ ಹೊಸದೊಂದು ಆಯೋಗ ರಚಿಸಿದ್ದಾರೆ. ಆ ಆಯೋಗ ವರದಿ ಕೊಡುವುದು ಆರು ತಿಂಗಳಾಗುತ್ತೋ ಒಂದು ವರ್ಷವಾಗುತ್ತೋ ಗೊತ್ತಿಲ್ಲ. ಒಂದು ವೇಳೆ ವಿಧಾನಸಭಾ ಚುನಾವಣೆ ಬಳಿಕ ತಾಪಂ, ಜಿಪಂ ಚುನಾವಣೆ ಮಾಡಿದರೂ ಅಶ್ಚರ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಅಂತೂ ಡ್ರೀಮ್-11 ವಿರುದ್ಧ ಎಫ್ಐಆರ್; ಆನ್ಲೈನ್ ಜೂಜಾಟದ ವಿರುದ್ಧ ಮೊದಲ ಕೇಸ್ ದಾಖಲು
ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಅದಕ್ಕೆ ಅಗತ್ಯವಿರುವ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯನ್ನು ಜನವರಿಯೊಳಗೆ ಮುಗಿಸಿ ನಂತರ ಆದಷ್ಟು ಬೇಗ ಚುನಾವಣೆ ನಡೆಸುವುದಾಗಿ ತಿಳಿಸಿತ್ತು. ಆದರೆ ಈಗ ಸಿದ್ದರಾಮಯ್ಯ ಅದು ಅಷ್ಟು ಬೇಗ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.
ಬಿಬಿಎಂಪಿ ಬೇಜವಾಬ್ದಾರಿಗೆ ಬಾಲಕ ಬಲಿ; ಪಾಲಿಕೆ ಉದ್ಯಾನದ ಹೊಂಡಕ್ಕೆ ಬಿದ್ದು 9 ವರ್ಷದ ಹುಡುಗ ಸಾವು