ಕರ್ನೂಲ್: ಮನೆಗೆ ಹೊಸ ಅತಿಥಿಯ ಆಗಮನವಾಗುತ್ತೆ. ನಮ್ಮ ಬದುಕಿಗೆ ಹೊಸ ಭರವಸೆ ಮೂಡುತ್ತೆ ಎಂಬ ಹೆಬ್ಬಯಕೆಯೊಂದಿಗೆ ಪತ್ನಿಯನ್ನು ಹೆರಿಗಾಗಿ ದಾಖಲಿಸಿದ್ದ. ಆದರೆ, ವಿಧಿಯಾಟ ಮಗು ಬದುಕುಳಿಯಲ್ಲ. ಅದಕ್ಕಿಂತ ಘೋರವೆಂದರೆ, ಆ ಮಗುವಿಗೆ ಮಣ್ಣಾಗುವ ಅವಕಾಶವೂ ಸಿಗಲಿಲ್ಲ.
ನಂದ್ಯಾಲ್ದ ಸಿರಿವೆಲ್ಲಾ ಬ್ಲಾಕ್ನ ಕೊಟಪಾಡು ಗ್ರಾಮದ ನಿವಾಸಿ ಶಂಷಾ ವಲಿ ನಂದ್ಯಾಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗಂದು ಪತ್ನಿ ಮಾದರ್ಬೀಯನ್ನು ದಾಖಲಿಸಿದ್ದ. ಆದರೆ, ಮಗು ಬದುಕುಳಿಯಲಿಲ್ಲ. ಕೊನೆಗೆ ತನ್ನೂರಿನವರಿಗೆ ಮಾಹಿತಿ ನೀಡಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದ. ಆದರೆ, ಇದಕ್ಕೆ ಗ್ರಾಮದ ಹಿರಿಯರು ಒಪ್ಪಲೇ ಇಲ್ಲ.
ನಂದ್ಯಾಲ್ದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿದ್ದು. ಮಗುವಿನ ಸಾವಿಗೆ ಕರೊನಾ ಕಾರಣವಾಗಿರಬಹುದು ಎಂದು ತಕರಾರು ತೆಗೆದಿದ್ದಾರೆ. ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಅಮಾನವೀಯವಾಗಿ ವರ್ತಿಸಿದ್ದಾರೆ.
ಇದನ್ನೂ ಓದಿ; ದೇಶೀಯ ಕರೊನಾ ಲಸಿಕೆ ಪ್ರಯೋಗಕ್ಕೆ ಸಿದ್ಧರಿದ್ದೀರಾ? ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ
ಬೇರೆ ದಾರಿ ಕಾಣದೇ, ಊರಿಗೆ ಬರುವ ದಾರಿಯಲ್ಲಿ ಕರ್ನೂಲ್- ಕಡಪಾ ನೀರಾವರಿ ಕಾಲುವೆಗೆ ಶಿಶುವನ್ನು ತಂದೆಯೇ ಎಸೆದಿದ್ದಾನೆ. ನೀರಿನಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಿಶುವಿನ ಮೈಮೇಲಿದ್ದ ಟ್ಯಾಗ್ನಿಂದಾಗಿ ಪೊಲೀಸರು ಪಾಲಕರನ್ನು ಗುರುತಿಸಿದ್ದಾರೆ. ನಾನೇಕೆ ಇಂಥ ಕೃತ್ಯ ಎಸಗಿದೆ ಎನ್ನುವುದಕ್ಕೆ ತಂದೆ ನಡೆದ ಕಥೆಯನ್ನೆಲ್ಲ ಹೇಳಿದ್ದಾನೆ.
ಇದನ್ನೂ ಓದಿ; ಕಂಟೇನರ್ನಲ್ಲಿ ಕೊಡ್ತಾರಾ ಕರೊನಾ ರೋಗಿಗಳಿಗೆ ಚಿಕಿತ್ಸೆ? ಹೇಗಿರುತ್ತೆ ಮಾಡ್ಯೂಲರ್ ಐಸಿಯು
ಕೊನೆಗೆ, ಗ್ರಾಮಸ್ಥರ ಮನವೊಲಿಸಿದ ಪೊಲೀಸರು, ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ. ಪಾಲಕರ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ.
ಕರೊನಾಕ್ಕೆ ನಾವೇಕೆ ಹೆದರಬೇಕಿಲ್ಲ; ಸೆಪ್ಟಂಬರ್ವರೆಗೆ ಹೇಗಿರಲಿದೆ ಪರಿಸ್ಥಿತಿ?