ಚಿತ್ರ: ಸಾರಾಂಶ
ನಿರ್ದೇಶನ: ಸೂರ್ಯ ವಸಿಷ್ಠ
ನಿರ್ಮಾಣ: ರವಿ ಕಶ್ಯಪ್
ತಾರಾಗಣ: ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶ್ರುತಿ ಹರಿಹರನ್, ಆಸ್ಿ ಕ್ಷತ್ರಿಯ, ರವಿ ಭಟ್, ಶ್ವೇತಾ ಗುಪ್ತ ಮತ್ತು ಮುಂತಾದವರು.
| ಹರ್ಷವರ್ಧನ್ ಬ್ಯಾಡನೂರು
“ನಮ್ಮೊಳಗೆ ಉಪಪ್ರಜ್ಞೆಯಿರುತ್ತದೆ. ಅದು ನಮ್ಮನ್ನು ನಾವು ನೋಡಿಕೊಳ್ಳುವ ಕತ್ತಲು, ಬೆತ್ತಲು ಜಾಗ. ಅಲ್ಲಿ ನಾವು ನೋಡುವ ಸತ್ಯ ಜಾಗೃತ ಜಗತ್ತಿನಲ್ಲಿ ನೋಡಲಾಗುವುದಿಲ್ಲ’ ಎಂದು ಅಭಯ್ ಶರ್ಮಾ (ಸೂರ್ಯ) ತಂದೆ ಸಂಜೀವ್ (ರವಿ), ತೇಜಸ್ವಿ ಪಂಡಿತ್ಗೆ (ದೀಪಕ್) ಹೇಳುತ್ತಾರೆ. “ಸಾರಾಂಶ’ ಚಿತ್ರದ ಕಥೆ ಉಪಪ್ರಜ್ಞೆ ಮತ್ತು ಜಾಗೃತ ಜಗತ್ತಿನ ನಡುವಿನ ಸಂರ್ಷಗಳ ನಡುವೆ ಸಾಗುತ್ತದೆ. ಅದನ್ನು ಪ್ರಯೋಗಾತ್ಮಕವಾಗಿ, ಫಿಲಾಸಫಿಗಳ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸೂರ್ಯ ವಸಿಷ್ಠ.
ಆತ ತೇಜಸ್ವಿ. ನಾರಾಯಣ್ (ಆಸ್ಿ) ಮತ್ತು ಐಶ್ವರ್ಯ ದತ್ತುಪುತ್ರ. ಸಣ್ಣ ವಯಸ್ಸಿನಲ್ಲೇ ಈ ವಿಷಯ ಗೊತ್ತಾಗಿ, ತಂದೆ&ತಾಯಿಯಿಂದ ಮಾನಸಿಕವಾಗಿ ದೂರವಾಗುತ್ತಾನೆ. ಆತನಿಗೆ ಬರಹಗಾರನಾಗುವ ಆಸೆ. ಆದರೆ, ತನ್ನಂತೆಯೇ ಮಗನೂ ಸಿಎ ಆಗಬೇಕೆನ್ನುವಾಸೆ ತಂದೆಯದು. ಅದರಂತೆ ಸಾಹಿತ್ಯದಿಂದ ದೂರಾಗಿ ಸಿಎ ಆಗುವ ತೇಜಸ್ವಿ, ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಳ್ಳುತ್ತಾನೆ. ಮತ್ತೊಂದೆಡೆ ನವದಂಪತಿ ಅಭಯ್ ಶರ್ಮಾ (ಸೂರ್ಯ) ಮತ್ತು ಮಾಯಾ (ಶ್ರುತಿ) ನಡುವಿನ ಸರಸ, ವಿರಸದ ಕಥೆ ಸಾಗುತ್ತಿರುತ್ತದೆ. ಅಭಯ್ ಮೇಲೆ ತಂದೆಗೆ ಅತಿಯಾದ ನಿರೀೆ. ತಾನೇನೇ ಮಾಡಿದರೂ ಅಪ್ಪನಿಗೆ ಖುಷಿಯಾಗುತ್ತಿಲ್ಲವಲ್ಲಾ ಎಂಬ ನೋವಿನಲ್ಲಿ ಅಭಯ್ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟಿರುತ್ತಾನೆ. ಎರಡು ಕಥೆಗಳೂ ಒಂದಕ್ಕೊಂದು ಬೆಸೆದುಕೊಂಡು ಸಾಗುತ್ತವೆ. ಆದರೆ, ಅದರಲ್ಲೊಂದು ವಾಸ್ತವ ಮತ್ತೊಂದು ಕಾಲ್ಪನಿಕ. ಕಥೆಗಾರನಿಗೆ ಆತ ಸೃಷ್ಟಿಸಿದ ಪಾತ್ರವೇ ಬುದ್ಧಿ ಹೇಳುತ್ತದೆ. ಕಥೆಗಾರ ಮತ್ತು ಪಾತ್ರ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ, ತಮ್ಮ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದೇ “ಸಾರಾಂಶ’.
ಟೈಟಲ್ ಕಾರ್ಡ್ನಲ್ಲೇ ವಿಭಿನ್ನತೆ ತೋರಿರುವ ನಿರ್ದೇಶಕ ಸೂರ್ಯ ವಸಿಷ್ಠ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಪ್ರಯೋಗ ಮಾಡಿದ್ದಾರೆ. ಜತೆಗೆ ಬದುಕಿನ ಫಿಲಾಸಫಿ ಹೇಳಿದ್ದಾರೆ. ನಟನೆಯಲ್ಲೂ ಅವರು ಹಿಂದೆ ಬಿದ್ದಿಲ್ಲ. ಆದರೆ, ಅಂತಮುರ್ಖಿ ತೇಜಸ್ವಿ ಪಾತ್ರದಲ್ಲಿ ದೀಪಕ್ ಸುಬ್ರಮಣ್ಯ ಅಭಿನಯ ಇಷ್ಟವಾಗುತ್ತದೆ. ಉಳಿದಂತೆ ಶ್ರುತಿ ಹರಿಹರನ್, ಶ್ವೇತಾ ಗುಪ್ತ, ರವಿ ಭಟ್, ಆಸ್ಿ ತಮ್ಮ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಉದಿತ್ ಹರಿತಾಸ್ ಸಂಗೀತ, ಅನಂತ್ ಭಾರದ್ವಾಜ್ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್. ಇದು ಕನ್ನಡ, ಇಂಗ್ಲೀಷ್ ಸಾಹಿತ್ಯ ಮತ್ತು ಸಿನಿಮಾ ಪ್ರೇಮಿಗಳಿಗೆ ಹತ್ತಿರವಾಗುವ ಚಿತ್ರ.