| ಹರ್ಷವರ್ಧನ್ ಬ್ಯಾಡನೂರು
ರಂಗಭೂಮಿ, ಕಿರುತೆರೆ, ಸಿನಿಮಾ, ಡಬ್ಬಿಂಗ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೆಗ್ಗಳಿಕೆ ಶ್ರೇಯಸ್ ತಲ್ಪಾಡೆಗೆ ಸಲ್ಲುತ್ತದೆ. 40ಕ್ಕೂ ಅಧಿಕ ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಫಿಲಂೇರ್ ಸೇರಿ ಹಲವು ಪ್ರಶಸ್ತಿಗಳು ದೊರೆತಿವೆ. ಇಂತಹ ಶ್ರೇಯಸ್ ಇದೀಗ “ಅಜಾಗ್ರತ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಮೊದಲ ಬಾರಿಗೆ “ವಿಜಯವಾಣಿ’ ಜತೆ ಮಾತನಾಡಿದ್ದಾರೆ.
- ಅಜಾಗ್ರತ ಚಿತ್ರತಂಡ ಸೇರಿದ್ದು ಹೇಗೆ?
– ನಿರ್ದೇಶಕ ಶಶಿಧರ್ ಸಂಪರ್ಕಿಸಿದ್ದರು. ಕಥೆ, ಪಾತ್ರ ಇಷ್ಟವಾದ ಕಾರಣ ಒಪ್ಪಿಕೊಂಡೆ. ಇದೊಂದು ಅದ್ಭುತ ಮಸಾಲಾ ಎಂಟರ್ಟೇನರ್ ಆಗಲಿದೆ. ಥ್ರಿಲ್ಲರ್, ಎಮೋಷನ್, ಡ್ರಾಮಾ, ಆ್ಯಕ್ಷನ್ ಎಲ್ಲವೂ ಚಿತ್ರದಲ್ಲಿದೆ. - ಚಿತ್ರವಿಗ ಯಾವ ಹಂತದಲ್ಲಿದೆ?
– ಇತ್ತೀಚೆಗಷ್ಟೆ ಎರಡು ಮುಖ್ಯ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು ಹೀಗೆ ಹಲವು ಚಿತ್ರರಂಗಗಳ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನಾನು ದೊಡ್ಡ ಮಟ್ಟದಲ್ಲಿ ಆ್ಯಕ್ಷನ್ ಸನ್ನಿವೇಶಗಳಲ್ಲಿ ನಟಿಸಿದ್ದೇನೆ. ಹಲವು ವಿಷಯಗಳಲ್ಲಿ ನನಗೆ ಈ ಸಿನಿಮಾ ವಿಶೇಷವಾದುದು.
ಇದನ್ನೂ ಓದಿ : ನನಗೂ ಹೆಂಡ್ತಿ ಬೇಕು : ತಬಲಾ ನಾಣಿ, ಚೈತ್ರಾ ಕೋಟೂರ್ ನಟಿಸಿರುವ ಕಾಮಿಡಿ ಚಿತ್ರ
- ನಿಮ್ಮ ಪಾತ್ರ ಹೇಗಿರಲಿದೆ?
– ನಾನೊಬ್ಬ ಆಗರ್ಭ ಶ್ರೀಮಂತನ ಪಾತ್ರದಲ್ಲಿ ನಟಿಸಿದ್ದೇನೆ. ಆತ ತನಗೆ ಗೊತ್ತಿಲ್ಲದೆಯೇ ತಪು$್ಪ ದಾರಿ ಹಿಡಿದಿರುತ್ತಾನೆ. ನಾಯಕಿ ಆತನಿಗೆ ತಪ್ಪಿನ ಅರಿವು ಮೂಡಿಸುತ್ತಾಳೆ. ಆತ ತಪು$್ಪಗಳನ್ನು ಹೇಗೆ ತಿದ್ದಿಕೊಳ್ಳುತ್ತೇನೆ ಎಂಬುದು ಕಥೆ. - ರಾಧಿಕಾ ಕುಮಾರಸ್ವಾಮಿ ಜತೆ ನಟಿಸಿದ ಅನುಭವ?
– ತುಂಬ ಚೆನ್ನಾಗಿತ್ತು. ಮಾಜಿ ಸಿಎಂ ಪತ್ನಿಯಾಗಿದ್ದರೂ ಸರಳ ವ್ಯಕ್ತಿತ್ವ ಅವರದು. ಅವರು ಕನ್ನಡದಲ್ಲಿ ತುಂಬ ಹೆಸರು ಮಾಡಿರುವ ನಟಿ. ಎಲ್ಲರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಶೂಟಿಂಗ್ ಸಮಯದಲ್ಲಿ ಎಲ್ಲರನ್ನೂ ಕೇರ್ ಮಾಡುತ್ತಿದ್ದರು. ಆರಾಮಾಗಿ, ಯಾವುದೇ ಒತ್ತಡವಿಲ್ಲದೇ ನಟಿಸುತ್ತಾರೆ.
ಇದನ್ನೂ ಓದಿ : ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಮಾಸ್ ಪೋಸ್ಟರ್ ರಿಲೀಸ್; ಟೀಸರ್ ಡೇಟ್ ಬಹಿರಂಗಪಡಿಸಿದ ಚಿತ್ರತಂಡ
- “ಪುಷ್ಪ’ ಚಿತ್ರದಲ್ಲಿ ನಿಮ್ಮ ಹಿಂದಿ ಡಬ್ಬಿಂಗ್ಗೆ ಅದ್ಭುತ ಪ್ರತಿಕ್ರಿಯೆ ದೊರೆತಿತ್ತು.
– ಹೌದು, ಅಲ್ಲು ಅರ್ಜುನ್ ಪಾತ್ರಕ್ಕೆ ಹಿಂದಿಯಲ್ಲಿ ಡಬ್ ಮಾಡಿದ್ದೆ. ಚಿತ್ರಕ್ಕೆ ತೆಲುಗಿನಲ್ಲಿ ಸಿಕ್ಕಷ್ಟೇ ಅತ್ಯುತ್ತಮ ಪ್ರತಿಕ್ರಿಯೆ ಹಿಂದಿಯಲ್ಲೂ ದೊರೆಯಿತು. ತುಂಬ ಜನ ನೀವೇ ಆ ಪಾತ್ರದಲ್ಲಿ ನಟಿಸಿದ್ದೀರೇನೋ ಎಂಬಷ್ಟು ಉತ್ತಮವಾಗಿ ಡಬ್ ಮಾಡಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. - ಕನ್ನಡ ಚಿತ್ರರಂಗದಲ್ಲಿ ಗೆಳೆಯರಿದ್ದಾರಾ?
– 2006ರಲ್ಲಿ “ದೋರ್’ ಚಿತ್ರದಲ್ಲಿ ನಟಿಸುವಾಗ ಅನಿರುದ್ಧ್ ಜಾತ್ಕರ್ ಪರಿಚಯವಾಗಿದ್ದರು. ಈಗ “ಅಜಾಗ್ರತ’ ಮೂಲಕ ಶಶಿಧರ್, ರವಿರಾಜ್, ರಾಧಿಕಾ ಕುಮಾರಸ್ವಾಮಿ, ರವಿವರ್ಮ ಸೇರಿ ಹಲವಾರು ಕನ್ನಡದ ಕಲಾವಿದರು, ತಂತ್ರಜ್ಞರು ಪರಿಚಯವಾಗಿದ್ದಾರೆ. ಜತೆಗೆ ತೆಲುಗು, ತಮಿಳು ಚಿತ್ರರಂಗದವರೂ ಪರಿಚಯವಾಗಿದ್ದಾರೆ.
- ರಂಗಭೂಮಿಗಾಗಿಯೇ ಓಟಿಟಿ ವೇದಿಕೆ ಮಾಡಿದ್ದೀರಿ…
– ನಾನು ರಂಗಭೂಮಿಯ ಹುಡುಗ. 1991ರಿಂದ 2005ರವರೆಗೆ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯನಾಗಿದ್ದೆ. ಮರಾಠಿ, ಹಿಂದಿ, ಇಂಗ್ಲೀಷ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಕರೊನಾ ಸಮಯದಲ್ಲಿ ರಂಗಭೂಮಿ ಕಲಾವಿದರು, ತಂತ್ರಜ್ಞರು ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಭಾರತದ ಮೊದಲ ಓಟಿಟಿ ವೇದಿಕೆ 9ರಸ ಪ್ರಾರಂಭಿಸಿದೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಜನರಿಗೆ ಅದರಿಂದ ಸಹಾಯವಾಗಿದೆ.