ಛತ್ತೀಸಗಢ : ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ತಲುಪಿಸಲು ಹರಿಯಾಣ ಸರ್ಕಾರ ಪ್ರತಿನಿತ್ಯ ವಿವಿಧ ರೈಲು ನಿಲ್ದಾಣಗಳಿಂದ ವಿಶೇಷ ಶ್ರಮಿಕ್ ರೈಲ್ವು ವ್ಯವಸ್ಥೆ ಮಾಡಿದೆ.
ಶನಿವಾರ 3600 ವಲಸೆ ಕಾರ್ಮಿಕರನ್ನು ರೇವಾರಿಯಿಂದ ಮೂರು ರೈಲುಗಳ ಮೂಲಕ ಬಿಹಾರ ಮತ್ತು ಮಧ್ಯಪ್ರದೇಶಕ್ಕೆ ಹಾಗೂ 1200 ವಲಸೆ ಕಾರ್ಮಿಕರನ್ನು ಭಿವಾನಿಯಿಂದ ಬಿಹಾರಕ್ಕೆ ಕಳುಹಿಸಲಾಯಿತು.
ಎಲ್ಲ ವಲಸೆ ಕಾರ್ಮಿಕರನ್ನು ವಿಶೇಷ ಬಸ್ಗಳ ಮೂಲಕ ರೈಲ್ವೆ ನಿಲ್ದಾಣಗಳಿಗೆ ಕರೆತರಲಾಯಿತು. ವ್ಯಾಕ್ಯೂಮ್ ಕ್ಲೀನರ್ಗಳ ಮೂಲಕ ಎಲ್ಲ ಪ್ಲಾಟ್ಫಾರ್ಮ್ಗಳನ್ನು ಸ್ವಚ್ಛಗೊಳಿಸಲಾಯಿತಲ್ಲದೆ ವಲಸೆ ಕಾಮಿರ್ಕರ ಕೈಗಳನ್ನು ಸ್ಯಾನಿಟೈಸ್ ಮಾಡಿಸಲಾಯಿತು. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಎಲ್ಲ ಕಂಪಾರ್ಟ್ಮೆಂಟ್ಗಳ ಮುಂದೆ ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಲಾಗಿತ್ತು.
ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ಹರಿಯಾಣ ಸರ್ಕಾರ ಭರಸಿದೆ ಎಂಬ ಅರ್ಥವಿರುವಂತೆ ಪ್ರತಿ ಟಿಕೆಟ್ಮೇಲೆ ಮುದ್ರಿಸಲಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ತಿಳಿಸಿದ್ದಾರೆ.