More

    ಶೂಟಿಂಗ್​ನಲ್ಲಿ ಕೆಎಸ್​ಎಸ್ ವಿದ್ಯಾರ್ಥಿ ಸಿದ್ಧಾರ್ಥ ಸಾಧನೆ

    ಹುಬ್ಬಳ್ಳಿ : ನಗರದ ಕನಕದಾಸ ಶಿಕ್ಷಣ ಸಮಿತಿಯ ಸ್ನಾತಕೋತ್ತರ ಎಂ.ಕಾಂ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಸಿದ್ಧಾರ್ಥ ಪ್ರಕಾಶ ದಿವಟೆ ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಶೂಟಿಂಗ್ ರೇಂಜ್​ನಲ್ಲಿ ನಡೆದ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ, 10 ಮೀಟರ್ ಏರ್ ಪಿಸ್ಟಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

    ಸಿದ್ಧಾರ್ಥ ಅವರ ಸಾಧನೆಗೆ ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಶಸ್ತಿ ವಿಜೇತ ಸಿದ್ಧಾರ್ಥನನ್ನು ಮಹಾವಿದ್ಯಾಲಯದ ಪಿಯು ಪ್ರಾಚಾರ್ಯ ಮತ್ತು ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಮತ್ತು ಬೋಧಕ ವೃಂದ ಸತ್ಕರಿಸಿದರು.

    ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಜಿ ಮಡ್ಲಿ, ಎಂ.ಕಾಂ ವಿಭಾಗದ ಸಂಯೋಜಕಿ ಜಯದೇವಿ ಚರಂತಿಮಠ, ಎಂಎ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಬೀರೇಶ ತಿರಕಪ್ಪನವರ, ಎಚ್.ಆರ್. ಕುರಿ, ಪುಷ್ಪಾ ಡಂಗನವರ, ಮಹೇಶ ಲಿಮಯೆ, ಎಸ್.ಎಸ್ ಹಿರೇಮಠ, ಮಂಜುಳಾ ಪಟ್ಟೆದ, ಮಂಜುನಾಥ ಶಿರಗುಪ್ಪಿ, ಮಹೇಶ ಕೋರಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts