More

    ಶಾಕಿಂಗ್ ನ್ಯೂಸ್ – ಗರ್ಭಿಣಿಯನ್ನು ಕೊಂದು ಶವವನ್ನು ಗಂಗಾ ನದಿ ಕಾಲುವೆಗೆಸದ್ರು!

    ಮುಜಾಫರನಗರ: ವರದಕ್ಷಿಣ ಸಂಬಂಧ ಗಲಾಟೆಯಲ್ಲಿ ಗರ್ಭಿಣಿಯನ್ನು ಹತ್ಯೆಗೈದು ಗಂಗಾ ನದಿ ಕಾಲುವೆಗೆಸೆದ ಹೃದಯವಿದ್ರಾವಕ ಘಟನೆ ಉತ್ತರ ಪರದೇಶದ ಮುಜಫರನಗರ ವ್ಯಾಪ್ತಿಯಲ್ಲಿ ನಡೆದಿದೆ.

    ವರದಕ್ಷಿಣೆ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲಳಾದ ಗರ್ಭಿಣಿಯನ್ನು ಪತಿ ಮತ್ತು ಆತನ ಕುಟುಂಬದವರು ಸೇರಿ ಹೊಡೆದು ಸಾಯಿಸಿದ್ದಾರೆ. ನಂತರ ಸಮೀಪದ ಗಂಗಾ ಕಾಲುವೆಗೆ ಎಸೆದು ಬಂದಿದ್ದಾರೆ. ಮೃತಳನ್ನು ನೇಹಾ (30) ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಆಶ್ರಮಕ್ಕಾಗಿ ಮಾಂಗಲ್ಯ ಒತ್ತೆ! : ಅನಾಥರಿಗೆ ಸಂಸ್ಕಾರ ಆಶ್ರಮ!

    ಆಕೆಯ ತಂದೆ ಕೊಟ್ಟ ದೂರಿನ ಮೇರೆಗೆ ಪತಿ ಮತ್ತು ಕುಟುಂಬದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ನೇಹಾಳನ್ನು ನಾಲ್ಕು ವರ್ಷ ಹಿಂದೆ ಕಮಲ್​ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಆತ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಇನ್ನಿಲ್ಲದಂತೆ ಪೀಡಿಸುತ್ತಿದ್ದರು.

    ಇದನ್ನೂ ಓದಿ: ‘ತುಪ್ಪ’ದ ಬೆಡಗಿ ರಾಗಿಣಿಗೆ ಸೊಳ್ಳೆ ಕಾಟವಂತೆ! ಹೀಗಿತ್ತು ಬಂಧನದ ಮೊದಲ ರಾತ್ರಿ

    ಆರಂಭದಲ್ಲಿ ಮನ್ನಿಸಲಾಗಿತ್ತಾದರೂ, ಬಳಿಕ ದುರಾಸೆ ಪ್ರದರ್ಶಿಸಲಾರಂಭಿಸಿದ್ದರಿಂದ ನೇಹಾ ಪ್ರತಿರೋಧ ತೋರಿದ್ದಳು. ಪರಿಣಾಮ ಆಕೆಯ ಜೀವ ಹೋಗಿದೆ.
    ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಕಮಲ್​ನನ್ನು ಪೊಲೀಸರು ಬಂಧಿಸಿದ್ದು, ಉಳಿದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಅತ್ಯಂತ ಅಮಾನವೀಯ ಘಟನೆ: ಹುಟ್ಟಿದ ಬೆನ್ನಲ್ಲೇ ಅವಳಿ ಮಕ್ಕಳಿಗೆ ವಿಷವುಣಿಸಿದ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts