More

    ಮನೆಯಲ್ಲಿದ್ದರೆ ಅದೇ ದೊಡ್ಡ ಹಬ್ಬ; ಸರ್ಕಾರದ ಆದೇಶ ಪಾಲಿಸೋಣ ಎಂದ ಶಿವಣ್ಣ

    ಬೆಂಗಳೂರು: ಎಲ್ಲೆಡೆ ಕರೊನಾ ಕಟ್ಟೆಚ್ಚರ ಜಾರಿಯಲ್ಲಿರುವುದರಿಂದ ಯುಗಾದಿ ಹಬ್ಬಕ್ಕೂ ಕಾರ್ಮೋಡ ಕವಿದಿದೆ. ಹಾಗಾಗಿ ಈ ಬಾರಿಯ ಹಬ್ಬ ಬೇಡವೇ ಬೇಡ. ಮನೆಯಲ್ಲಿ ಸುರಕ್ಷಿತವಾಗಿದ್ದರೆ ಅದೇ ದೊಡ್ಡ ಹಬ್ಬ ಎಂಬಂಥ ಮಾತುಗಳೂ ಕೇಳಿಬರುತ್ತಿವೆ. ಸರ್ಕಾರವೂ ಜಾಗೃತಿ ಮೂಡಿಸುವ ಕೆಲಸವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಈ ಮಧ್ಯೆ ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ‘ಸರ್ಕಾರ ಹೊರಡಿಸಿದ ಆದೇಶ ಪಾಲಿಸೋಣ. ಕರೊನಾ ಓಡಿಸುವುದು ನಮ್ಮ ಕರ್ತವ್ಯ. ಹಬ್ಬ ಬಂದಿದೆ. ಅದ್ದೂರಿ ಆಚರಣೆ ಬೇಡ. ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಹೊರಬರದಂತೆ ಕಟ್ಟಪ್ಪಣೆ ಹೊರಡಿಸಿದ್ದರೂ, ಜನತೆ ಹಬ್ಬದ ಖರೀದಿ ಸಲುವಾಗಿ ಮಾರುಕಟ್ಟೆಗಳತ್ತ ಹೊರಟಿದ್ದಾರೆ. ಅದನ್ನು ಗಮನಿಸಿದ ಶಿವಣ್ಣ, ‘ಈಗಾಗಲೇ ಜನತೆ ಭಯದಲ್ಲಿದೆ. ಗುಂಪು ಗುಂಪಾಗಿ ಸೇರಬೇಡಿ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಪರಿಸ್ಥಿತಿ ಕೈ ಮೀರುತ್ತಿದ್ದರೂ, ಹೊರ ಬರುವುದೇಕೆ? ಪೊಲೀಸರ ಲಾಠಿಗೆ ಕೆಲಸ ಕೊಡಬೇಡಿ. ದಯಮಾಡಿ, ಮನೆಯಲ್ಲೇ ಕುಟುಂಬದೊಟ್ಟಿಗೆ ಹಬ್ಬ ಮಾಡಿ. ಆಗಾಗ ಕೈ ತೊಳೆಯುತ್ತಿರಿ. ಸರ್ಕಾರದ ಆದೇಶ ಪಾಲಿಸಿ’ ಎಂದು ಕಳಕಳಿಯಿಂದ ಹೇಳಿದ್ದಾರೆ.

    ಇತ್ತ ನಟ ನೀನಾಸಂ ಸತೀಶ್ ಸಹ, ಯುಗಾದಿ ಹಬ್ಬ ಬೇಡವೇ ಬೇಡ ಎಂದಿದ್ದಾರೆ. ‘ಬದುಕಿದ್ದರೆ ಮುಂದಿನ ವರ್ಷವು ಯುಗಾದಿ ಮಾಡಬಹುದು. ದಯವಿಟ್ಟು ಮನೆಯಲ್ಲೇ ಇರಿ. ಗುಂಪು ಗುಂಪಾಗಿ ಓಡಾಡುವುದು ಬೇಡ. ಇದರಿಂದ ನಿಮಗಷ್ಟೇ ಅಲ್ಲದೆ, ನಿಮ್ಮ ಜತೆಗೆ ಇದ್ದವರಿಗೂ ಅಪಾಯ. ನಿಮ್ಮ ಕುಟುಂಬಕ್ಕೂ’ ಎಂದು ಟ್ವಿಟ್ ಮಾಡಿ ಮನೆಯಲ್ಲಿರುವಂತೆ ಕೋರಿದ್ದಾರೆ.

    ಇತ್ತ ಸ್ಯಾಂಡಲ್‌ವುಡ್‌ನ ಇನ್ನೂ ಹಲವು ನಟ-ನಟಿಯರು ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಣೆ ಮಾಡಿ. ಅದ್ದೂರಿತನದ ಮೊರೆ ಹೋಗಬೇಡಿ ಎಂದಿದ್ದಾರೆ.

    ಕರೊನಾ ಹಿನ್ನೆಲೆಯಲ್ಲಿ ಹೇಗಿವೆ ಗೊತ್ತಾ ರಾಬರ್ಟ್, ಅವತಾರ ಪುರುಷ ಚಿತ್ರದ ಹೊಸ ಪೋಸ್ಟರ್ಗಳು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts