ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಯಾವುದೇ ಹಬ್ಬ ಬಂದರೂ ಆ ಹಬ್ಬದ ವಿಶೇಷತೆಯನ್ನು ಗಮನದಲ್ಲಿಟ್ಟುಕೊಂಡೇ ಇಲ್ಲಿಯವರೆಗೂ ಪೋಸ್ಟರ್ಗಳನ್ನು ಬಿಡುಗಡೆ ಮಾಡುತ್ತ ಬಂದಿದೆ. ಈಗ ಯುಗಾದಿ ಪ್ರಯುಕ್ತ ವಿಭಿನ್ನವಾದ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರತಂಡ.
ಚಿತ್ರದ ನಾಯಕ ಶರಣ್ ಮತ್ತು ಆಶಿಕಾ ರಂಗನಾಥ್ ಮುಖಕ್ಕೆ ಮಾಸ್ಕ್ ಹಾಕೊಂಡು ಯುಗಾದಿಯ ಶುಭಾಶಯ ಕೋರಿದ್ದಾರೆ. ಮನೆಯಲ್ಲೇ ಇರಿ. ಹೊರಗೆ ಬಾರದೆ ಹಬ್ಬ ಮಾಡಿ ಎಂದು ಹೇಳಿಕೊಂಡು ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಅಂದಹಾಗೆ, ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಅವತಾರ ಪುರುಷ ಸಿನಿಮಾ, ಸದ್ಯ ಕೊನೇ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ಅಥವಾ ಜೂನ್ ನಲ್ಲಿ ಬಿಡುಗಡೆ ಆಗಬೇಕಿತ್ತು. ಈಗ ಕರೊನಾ ಹಾವಳಿಯಿಂದ ಬಿಡುಗಡೆಯನ್ನು ಮುಂದೂಡಿಕೊಂಡಿದೆ. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.
ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು …
ಹಬ್ಬ ಮಾಡುವುದು ಭಾಗ್ಯ
ಅದಕ್ಕೂ ಮುಖ್ಯ ಆರೋಗ್ಯ…
stay home stay safe @sharanhruday @AshikaRanganath @Pushkara_M @AshwinR19706933 @Sheelam55387743 pic.twitter.com/g5PP8e81OA— ಸುನಿ/SuNi (@SimpleSuni) March 25, 2020
ಗದ್ದೆ ಉಳುಮೆಗೆ ಹೊರಟ ಪ್ರೇಮ್
ಲವ್ಲಿ ಸ್ಟಾರ್ ಪ್ರೇಮ್ ಸದ್ಯ ರೈತ. ಅಂದರೆ, ಸಿನಿಮಾ ಕರಿಯರ್ ನ 25ನೇ ಚಿತ್ರವಾಗಿ ಪ್ರೇಮಂ ಪೂಜ್ಯಂ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಹಲವು ಅವತಾರಗಳಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದು, ಆ ಪೈಕಿ ಯುಗಾದಿ ಪ್ರಯುಕ್ತ ರೈತನ ಗೆಟಪ್ ನಲ್ಲಿ ಅವರು ಎದುರಾಗಿದ್ದಾರೆ. ಜತೆಗೆ ಕರೊನಾ ಬಗ್ಗೆಯೂ ಪೋಸ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ‘ ಕಷ್ಟವಿರಲಿ ಸುಖವಿರಲಿ ತಾಯಿಯಂತೆ ಅನ್ನವಿಕ್ಕುವ ರೈತರಿಗೆ ಸದಾ ಕಾಲ ಗಡಿ ಪ್ರದೇಶದಲ್ಲಿ ನಮ್ಮನ್ನು ಕಾಯುವ ಯೋಧರಿಗೆ, ಕರೊನಾ ವಿರುದ್ಧ ನಮ್ಮನ್ನು ಕಾಪಾಡುತ್ತಿರುವ ವೈದ್ಯರಿಗೆ, ಪೊಲೀಸ್ ಇಲಾಖೆಗೆ ಯುಗಾದಿ ಹಬ್ಬದ ಶುಭಾಶಯ ಎಂದಿದ್ದಾರೆ. ಅಂದಹಾಗೆ ಪ್ರೇಮಂ ಪೂಜ್ಯಂ ಚಿತ್ರವನ್ನು ಡಾ.ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದು, ನವನಟಿ ಬೃಂದಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕಷ್ಟವಿರಲಿ ಸುಖವಿರಲಿ ತಾಯಿಯಂತೆ ಅನ್ನವಿಕ್ಕುವ ರೈತರಿಗೆ, ಸದಾ ಕಾಲ ನಮ್ಮನ್ನು ಕಾಯುವ ಯೋಧರಿಗೆ, ಕರೋನ ವಿರುದ್ಧ ನಮ್ಮನ್ನು ಕಾಪಾಡುತ್ತಿರುವ ವೈದ್ಯರಿಗೆ, ಪೊಲೀಸರಿಗೆ ಹಾಗು ನಾಡಿನ ಸಮಸ್ತ ಜನತೆಗೆ
ಯುಗಾದಿ ಹಬ್ಬದ ಶುಭಾಶಯಗಳುಪ್ರೇಮಂ ಪೂಜ್ಯಮ್
ದೈವಂ ಚರಣಂ #STAYLOVELY pic.twitter.com/B8QK3nC9jE— Prem Nenapirali (@StylishstarPrem) March 25, 2020
ಸ್ವಾಸ್ಥ್ಯ ಕಾಪಾಡಿಕೊಳ್ಳಲು ರಾಬರ್ಟ್ ಮನವಿ
ಇತ್ತ ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ರಾಬರ್ಟ್ ಸಿನಿಮಾ ತಂಡ ಸ್ವಚ್ಛವಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ ಎಂಬ ವಾಕ್ಯದೊಂದಿಗೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಕೇಳದ ನಾಡಿನ ಜನತೆ ಎಲ್ಲೆಂದರಲ್ಲಿ ಹಬ್ಬದಾಚರಣೆಯ ಗುಂಗಿನಲ್ಲಿದೆ. ಅದೆಲ್ಲವನ್ನು ಬಿಟ್ಟು ಮನೆಯಲ್ಲಿರಿ ಎಂದು ದರ್ಶನ್ ಕೈ ಮುಗಿದು ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜಾಗೃತೆಯಿಂದ ಇರಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ವರ್ಷ ಸಕಲ ಆಯಸ್ಸು ,ಆರೋಗ್ಯ ಮತ್ತು ಸಮೃದ್ಧಿ ನಿಮ್ಮದಾಗಲಿ. ನಾವೆಲ್ಲರೂ ಒಟ್ಟಿಗೆ ಈ ಮಾರಕ ಕರೋನ ವೈರಸ್ ವಿರುದ್ಧ ಹೋರಾಡೋಣ. ಸ್ವಚ್ಛವಾಗಿರಿ, ಸ್ವಸ್ತರಾಗಿರಿ, ಸುರಕ್ಷಿತವಾಗಿರಿ, ಸದ್ಯಕ್ಕೆ ಮನೆಯಲ್ಲಿಯೇ ಇರಿ.
ನಿಮ್ಮ ದಾಸ ದರ್ಶನ್ pic.twitter.com/sIXUKnov5C— Darshan Thoogudeepa (@dasadarshan) March 25, 2020
ಚಿತ್ರರಂಗಕ್ಕೆ ಮುಂದುವರೆದ ಕರ್ಫ್ಯೂ: ಏಪ್ರಿಲ್ 14ರ ನಂತರವಾದರೂ ಎಲ್ಲಾ ಸರಿ ಹೋಗತ್ತಾ?