More

    ಶಿವಾಜಿ ಸುರತ್ಕಲ್ 2.0 ಫೆಬ್ರವರಿಯಲ್ಲಿ ಚಾಲನೆ

    ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದ ಬಿಡುಗಡೆಗೆ ಮುಂಚೆಯೇ, ಆ ಚಿತ್ರದ ಮುಂದುವರಿದ ಭಾಗ ಮಾಡಬಹುದು ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದರು. ಇದೊಬ್ಬ ಪೊಲೀಸ್ ಪತ್ತೇದಾರಿಯ ಸಾಹಸದ ಕಥೆಯಾದ್ದರಿಂದ, ಎಷ್ಟು ಭಾಗಗಳಲ್ಲಿ ಬೇಕಾದರೂ ಚಿತ್ರ ಮಾಡಬಹುದು ಎಂದಿದ್ದರು.

    ದರಂತೆ ಇದೀಗ ಶಿವಾಜಿ ಸುರತ್ಕಲ್​ನ ಇನ್ನೊಂದು ಸಾಹಸವನ್ನು ತೆರೆಯ ಮೇಲೆ ತರುವುದಕ್ಕೆ ಅವರು ಸಿದ್ಧತೆ ನಡೆಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಫೆಬ್ರವರಿಯಲ್ಲಿ ಚಿತ್ರದ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಆಕಾಶ್, ‘ಕಥೆ ಅಂತಿಮವಾಗಿದೆ. ಚಿತ್ರಕಥೆ ಬರೆಯುತ್ತಿದ್ದು, ಇನ್ನು 10 ದಿನಗಳಲ್ಲಿ ಆ ಕೆಲಸ ಮುಗಿಯಲಿದೆ.

    ಇದು ನಿಜಕ್ಕೂ ಮೊದಲ ಚಿತ್ರಕ್ಕಿಂತ ಇನ್ನೊಂದು ಲೆವೆಲ್ ಹೆಚ್ಚಿರುತ್ತದೆ. ಕಳೆದ ಒಂದು ವರ್ಷದಿಂದ ಈ ಕಥೆ ಮಾಡುತ್ತಿದ್ದೇವೆ. ಲಾಕ್​ಡೌನ್ ಸಮಯದಲ್ಲೂ ವಿಡಿಯೋ ಕಾಲ್ ಮೂಲಕ ಸಾಕಷ್ಟು ಚರ್ಚೆ ಮಾಡಿದ್ದೇವೆ. ‘ರಣಗಿರಿ ರಹಸ್ಯ’ ತರಹ ಇಲ್ಲಿ ಒಂದೇ ಕಥೆ ಇರುವುದಿಲ್ಲ. ಕಥೆಗಳು ಇಂಟರ್​ಲಿಂಕ್ ಆಗಿರುತ್ತವೆ. ಪ್ರೇಕ್ಷಕರಿಗೆ ನಿಜಕ್ಕೂ ವಿಭಿನ್ನ ಅನುಭವ ಕೊಡಲಿದೆ’ ಎನ್ನುತ್ತಾರೆ. ಸದ್ಯಕ್ಕೆ ‘ಶಿವಾಜಿ ಸುರತ್ಕಲ್ 2’ ಹೆಸರಿನಲ್ಲಿ ಕೆಲಸಗಳು ಶುರುವಾಗಿದ್ದು, ಮುಂದಿನ ತಿಂಗಳು ಸ್ಪಷ್ಟ ಚಿತ್ರಣ ಸಿಗಲಿದೆಯಂತೆ. ‘ರಣಗಿರಿ ರಹಸ್ಯ’ ಚಿತ್ರ ನಿರ್ವಿುಸಿದ್ದ ರೇಖಾ ಮತ್ತು ಅನೂಪ್ ಗೌಡ ನಿರ್ವಿುಸುತ್ತಿದ್ದಾರೆ.

    ಯುವರಾಜ್​ ನನಗೆ ಕೋಟಿ ಕೊಟ್ಟಿಲ್ಲ, 75 ಲಕ್ಷ ಕೊಟ್ಟಿದ್ದಾರೆ; ಯುವರಾಜ್​ ಜತೆಗಿನ ಸಂಬಂಧದ ಬಗ್ಗೆ ಮಾಹಿತಿ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ

    ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts