More

    ಬಿಜೆಪಿ ನಾಯಕನ ಮೇಲೆ ಕಪ್ಪು ಮಸಿ ಸುರಿದ ಶಿವಸೇನೆ ನಾಯಕರು! ಸೀರೆ ತೊಡುವಂತೆ ಮಾಡಿದರು!

    ಮುಂಬೈ: ಇತ್ತೀಚೆಗೆ ಕರ್ನಾಟಕದ ವಕೀಲೆಯೊಬ್ಬರು ಸಾಹಿತಿ ಭಗವಾನ್​ ಮೇಲೆ ಕಪ್ಪು ಮಸಿ ಎರಚಿ ಸುದ್ದಿಯಾಗಿತ್ತು. ಇದೀಗ ಅದೇ ತರಹದ ಮತ್ತೊಂದು ಘಟನೆ ಮಹಾರಾಷ್ಟ್ರದ ಸೊಲಾಪುರದಲ್ಲಿ ವರದಿಯಾಗಿದೆ. ಆಡಳಿತದಲ್ಲಿರುವ ಶಿವಸೇನೆ ಪಕ್ಷದ ಕಾರ್ಯಕರ್ತರು ಬಿಜೆಪಿ ನಾಯಕನೊಬ್ಬನ ಮೇಲೆ ಕಪ್ಪು ಮಸಿ ಎರಚಿರುವುದಾಗಿ ಸುದ್ದಿಯಾಗಿದೆ.

    ಭಾನುವಾರದಂದು ಇಂತದ್ದೊಂದು ಘಟನೆ ನಡೆದಿದೆ. ವೈಟ್​ ಅಂಡ್​ ವೈಟ್​ ಧರಿಸಿರುವ ಒಂದಿಷ್ಟು ಜನರು ಓರ್ವ ವ್ಯಕ್ತಿಯನ್ನು ಸುತ್ತುವರೆದು, ಕಪ್ಪು ಮಸಿ ಎರಚುತ್ತಾರೆ. ಅದಾದ ಮೇಲೆ ಸೀರೆಯೊಂದನ್ನು ಆತನ ಹೆಗಲ ಮೇಲಿಟ್ಟು, ತೊಡುವಂತೆ ಆಗ್ರಹಿಸುತ್ತಾರೆ. ಈ ರೀತಿ ದಾಳಿ ನಡೆಸಿದವರು ಶಿವಸೇನೆಯ ಕಾರ್ಯಕರ್ತರು ಎನ್ನಲಾಗಿದೆ. ದಾಳಿಗೆ ಒಳಗಾದವ ಬಿಜೆಪಿ ನಾಯಕ ಶಿರೀಶ್ ಕಟೇಕರ್ ಎಂದು ಎಎನ್​ಐ ವರದಿ ಮಾಡಿದೆ. ಆತ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಅದೇ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ತಿಳಿಸಲಾಗಿದೆ.

    ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸೋಲಾಪುರ ಪೊಲೀಸ್​ ಠಾಣೆಯಲ್ಲಿ 17 ಜನರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಪಾಕ್‌ಗೆ ತೆರಳಿದ ಕಾಶ್ಮೀರಿ ಯುವಕರು ಕಣ್ಮರೆ- ವಾಪಸ್‌ ಬಂದವರೂ ನಾಪತ್ತೆ! ಆತಂಕದ ವರದಿ ಬಿಚ್ಚಿಟ್ಟ ಭದ್ರತಾ ಪಡೆ

    ಕಾರು ತೊಳೆಯುತ್ತಿದ್ದವ ಮಾಟ ಮಂತ್ರ ಶುರು ಮಾಡಿದ ! ಈಗ ಪೊಲೀಸರ ಅತಿಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts