ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಪೋಸ್ಟ್ ಮಾಡಲಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಶಿವಸೇನಾ ಮಹಿಳಾ ಕಾರ್ಯಕರ್ತೆಯೊಬ್ಬಳು ಇಂಕ್ ಸುರಿದು ಅಮಾನವೀಯವಾಗಿ ನಡೆದುಕೊಂಡ ಘಟನೆ ಮಂಗಳವಾರ ವರದಿಯಾಗಿದೆ.
ಮಹಾರಾಷ್ಟ್ರದ ಸರ್ಕಾರಿ ನೌಕರನಾಗಿರುವ ಸಂತ್ರಸ್ತನ ಮೇಲೆ ಇಂಕ್ ಸುರಿದಿದ್ದಲ್ಲದೆ, ಶಿವಸೇನಾ ಕಾರ್ಯಕರ್ತರು ಹಲ್ಲೆಯನ್ನು ನಡೆಸಿ ಆತನನ್ನು ನಾಲಾಯಕ್ ಎಂದು ಜರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಉದ್ಧವ್ ಠಾಕ್ರೆಯನ್ನು ಟೀಕಿಸಿದ್ದಕ್ಕೆ ಈ ರೀತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಶಿವಸೇನಾ ಕಾರ್ಯಕರ್ತೆ ಎನ್ನಲಾದ ಮಹಿಳೆಯೊಬ್ಬಳು ವ್ಯಕ್ತಿಯ ಮೇಲೆ ಇಂಕ್ ಸುರಿಯುತ್ತಿರುವುದನ್ನು ಕಾಣಬಹುದಾಗಿದೆ.
ಇದೇ ತೆರನಾದ ಘಟನೆಯೊಂದು ಕಳೆದ ಭಾನುವಾರ ಮುಂಬೈ ವಾಡ್ಲಾ ಏರಿಯಾದಲ್ಲಿ ನಡೆದಿತ್ತು. ಠಾಕ್ರೆ ವಿರುದ್ಧ ಅವಹೇಳನಕಾರಿಯಾದ ಪೋಸ್ಟ್ ಹಾಕಿದ್ದಾನೆಂದು 30 ವರ್ಷದ ಹಿರಾಮನಿ ತಿವಾರಿ ಎಂಬಾತನ ಮೇಲೆ ಶಿವಸೇನಾ ಕಾರ್ಯಕರ್ತರು ಹಲ್ಲೆ ಮಾಡಿದ್ದರು. (ಏಜೆನ್ಸೀಸ್)
#WATCH Maharashtra: Ink poured on a man reportedly by a woman Shiv Sena worker, in Beed allegedly over his social media post criticising Chief Minister Uddhav Thackeray. (30.12.19) pic.twitter.com/xH6QzTiDzx
— ANI (@ANI) December 30, 2019