ಹರಪನಹಳ್ಳಿ: ತಾಲೂಕಿನ ಶಿಂಗ್ರಿಹಳ್ಳಿ ಗ್ರಾಮದಲ್ಲಿ ಸೋಮವಾರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಮನನೊಂದು ಪತಿಯೂ ನೇಣಿಗೆ ಶರಣಾಗಿದ್ದಾನೆ. ಸುಧಾ (30), ತೆಲಿಗರ ಹನುಮಂತಪ್ಪ(33) ಆತ್ಮಹತ್ಯೆಗೆ ಶರಣಾದ ದಂಪತಿ.
ಕೌಟುಂಬಿಕ ಕಲಹ ಹಾಗೂ ಮಕ್ಕಳಾಗದ ಕೊರಗಿನಿಂದ ಸುಧಾ, ಮನೆಯಲ್ಲಿಯೇ ವಿಷ ಸೇವಿಸಿದ್ದಾರೆ. ಈ ವಿಷಯ ತಿಳಿದು ದಿಗ್ಭ್ರಮೆಗೊಂಡ ಹನುಮಂತಪ್ಪ ಜಮೀನಿಗೆ ತೆರಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು. ಎರಡೂ ಮನೆಯವರು ನೀಡಿದ ಪ್ರತ್ಯೇಕ ದೂರಿನ ಮೇರೆಗೆ ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.