More

    ಬಿಜೆಪಿ ಬಿಟ್ಟು ತಪ್ಪು ಮಾಡಿದ್ದೆ: ನಾಯಕರ ಕ್ಷಮೆ ಕೋರಿದ ತಲ್ಲೂರು

    ಶಿವಮೊಗ್ಗ: ಈ ಹಿಂದೆ ಕಾರಣಾಂತರದಿಂದ ಬಿಜೆಪಿ ತೊರೆದಿದ್ದೆ. ನನಗೆ ತಪ್ಪಿನ ಅರಿವಾಗಿದೆ. ಅದಕ್ಕಾಗಿ ಬಿ.ವೈ.ರಾಘವೇಂದ್ರ ಹಾಗೂ ಕೆ.ಎಸ್.ಈಶ್ವರಪ್ಪ ಅವರಲ್ಲಿ ಕ್ಷಮೆ ಕೋರಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ರಾಜು ಎಂ.ತಲ್ಲೂರು ಹೇಳಿದರು.
    ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ಬಿಜೆಪಿಗೆ ಬಂದಿದ್ದೇನೆ. ನರೇಂದ್ರ ಮೋದಿ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಜನಪರ ಚಿಂತನೆಗಳು ನನಗೆ ಪ್ರೇರಣೆಯಾಗಿವೆ ಎಂದರು.
    ಸೊರಬ ಕ್ಷೇತ್ರಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅನೇಕ ಯೋಜನೆಗಳನ್ನು ನೀಡಿದ್ದಾರೆ. ನೀರಾವರಿ ಯೋಜನೆಗಳು ಕಾರ್ಯಗತವಾಗಿವೆ. ಆಸ್ಪತ್ರೆಗೆ ವೈದ್ಯರ ನೇಮಕಾತಿಯಾಗಿದೆ. ಶಿಕಾರಿಪುರದಂತೆ ಸೊರಬವೂ ಅಭಿವೃದ್ಧಿಯಾಗಿದೆ. ನನ್ನ ಕನಸು ಈಡೇರಿದೆ ಎಂದು ತಿಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts